Advertisement

ಚಾಮರಾಜನಗರ: ಟಿಪ್ಪರ್ ಡಿಕ್ಕಿ ಹೊಡೆದು ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವು

05:07 PM Jan 09, 2021 | Team Udayavani |

ಚಾಮರಾಜನಗರ: ಬೈಕಿಗೆ ಟಿಪ್ಪರ್ ಹಿಂಬದಿಯಿಂದ ಡಿಕ್ಕಿಯಾದ ಕಾರಣ ಬೈಕ್ ಸವಾರರಿಬ್ಬರು ಮೃತಪಟ್ಟಿರುವ ಘಟನೆ ನಗರದ ಸತ್ತಿ ರಸ್ತೆಯ ಸಿದ್ಧಾರ್ಥ ಚಿತ್ರಮಂದಿರದ‌ ಸಮೀಪ ನಡೆದಿದೆ.

Advertisement

ಬ್ಯಾಡಮೂಡ್ಲು ಗ್ರಾಮದ ಮಣಿ ಮತ್ತು ಹೊಂಗನೂರು ಗ್ರಾಮದ ನಟರಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮಧ್ಯಾಹ್ನ 3.30 ರ ಸಮಯದಲ್ಲಿ ಯುವಕರು ಪಲ್ಸರ್ ಬೈಕ್‌ನಲ್ಲಿ‌ ಹರದನಹಳ್ಳಿ ಕಡೆಗೆ ಹೋಗುತ್ತಿದ್ದರು ಈ ವೇಳೆ ಹಿಂದಿನಿಂದ ಬಂದ ಟಿಪ್ಪರ್ ಬೈಕ್ ಗೆ ಡಿಕ್ಕಿ ಹೊಡೆದಿದೆ ಪರಿಣಾಮ ಬೈಕ್ ಸವಾರರು ರಸ್ತೆಗೆ ಬಿದ್ದಿದ್ದು ಅವರ ಮೇಲೇ ಟಿಪ್ಪರ್ ಹರಿದಿದೆ.
ತೀವ್ರ ಗಾಯಗಳಾಗಿ ಯುವಕರಿಬ್ಬರು ಮೃತಪಟ್ಟಿದ್ದಾರೆ.
ಸಂಚಾರ ಠಾಣೆ‌ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ:ಲಡಾಖ್ ನ ಚುಶುಲ್ ಸೆಕ್ಟರ್ ಗಡಿಯಲ್ಲಿ ಚೀನಾ ಸೈನಿಕ ಭಾರತೀಯ ಸೇನೆಯ ವಶಕ್ಕೆ, ವಿಚಾರಣೆ

Advertisement

Udayavani is now on Telegram. Click here to join our channel and stay updated with the latest news.

Next