Advertisement

ಹಣ, ಚಿನ್ನ ದುರುಪಯೋಗ: ಫೈನಾನ್ಸ್‌ನ ನೌಕರರಿಬ್ಬರ ಸೆರೆ

07:38 PM Jun 20, 2021 | Team Udayavani |

ಚಾಮರಾಜನಗರ: ಸೇಫ್ಟಿ ಲಾಕರ್‌ನಲ್ಲಿಇಟ್ಟಿದ್ದ6.10 ಲಕ್ಷ ರೂ.,316 ಗ್ರಾಂ ಚಿನ್ನಹಾಗೂ 240 ಗ್ರಾಂ ತೂಕದ ರೋಲ್ಡ್‌ಗೋಲ್ಡ್‌ ಚಿನ್ನವನ್ನು ಬೇರೆ ಗ್ರಾಹಕರಹೆಸರಿನಲ್ಲಿ ತಾವು ಕರ್ತವ್ಯನಿರ್ವಹಿಸುತ್ತಿದ್ದ ಬ್ರಾಂಚ್‌ನಲ್ಲಿ ಗಿರಿವಿಇಟ್ಟು ಒಟ್ಟು 29.43 ಲಕ್ಷ ರೂ.ದುರುಪಯೋಗ ಪಡಿಸಿಕೊಂಡಿದ್ದ ಮುತ್ತೂಟ್‌ ಫೈನಾನ್ಸ್‌ ಲಿ ಬ್ರಾಂಚ್‌ನಇಬ್ಬರು ನೌಕರರನ್ನು ಪೊಲೀಸರು ಬಂಧಿಸಿ ಹಣ ಮತ್ತು ಚಿನ್ನವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

Advertisement

ಚಾ.ನಗರಪಟ್ಟಣದ ಬಿ. ರಾಚಯ್ಯ ಜೋಡಿರಸ್ತೆಯಲ್ಲಿರುವ ಮುತ್ತೂಟ್‌ ಫೈನಾನ್ಸ್‌ಲಿಮಿಟೆಡ್‌ ಬ್ರಾಂಚ್‌ ಆಫೀಸ್‌ನಲ್ಲಿಬ್ರಾಂಚ್‌ನ ನೌಕರರಾದ ಕಿರಣ್‌ ಮತ್ತುಮೋಹನ್‌ ಕುಮಾರ್‌ ಬಂಧಿತರು.ಇವರಿಬ್ಬರು ಸೇಫ್ಟಿ ಲಾಕರ್‌ನಲ್ಲಿ ಇಟ್ಟಿದ್ದ6.10 ಲಕ್ಷ ರೂ. ನಗದು, 316 ಗ್ರಾಂಚಿನ್ನ ಹಾಗು240 ಗ್ರಾಂ ತೂಕದ ರೋಲ್ಡ್‌ಗೋಲ್ಡ್‌ ಚಿನ್ನವನ್ನು ಬೇರೆ ಗ್ರಾಹಕರಹೆಸರಿನಲ್ಲಿ ತಾವು ಕರ್ತವ್ಯನಿರ್ವಹಿಸುತ್ತಿದ್ದ ಬ್ರಾಂಚ್‌ನಲ್ಲಿ ಗಿರಿವಿಇಟ್ಟು ಹಣ ದುರುಪಯೋಗಪಡಿಸಿಕೊಂಡಿದ್ದಾರೆಂದು ದೂರುದಾಖಲಾಗಿತ್ತು.

ಪ್ರಕರಣವನ್ನುಭೇದಿಸಿರುವ ಪೊಲೀಸರು ಆರೋಪಿ ಕಿರಣ್‌ ಹಾಗೂ ಮೋಹನ್‌ಕುಮಾರ್‌ನನ್ನು ವಶಕ್ಕೆ ಪಡೆದು 316 ಗ್ರಾಂ ತೂಕದಅಸಲಿ ಚಿನ್ನ,240 ಗ್ರಾಂ ತೂಕದ ಉಮಾಗೋಲ್ಡ್‌ ಚಿನ್ನವನ್ನು ಬೇರೆಯವರಹೆಸರಿನಲ್ಲಿ ಅಡವಿಟ್ಟಿದ್ದ ಒಟ್ಟು ಮೌಲ್ಯ29 ಲಕ್ಷ ಮೌಲ್ಯದ ಚಿನ್ನವನ್ನು ಆರೋಪಿಗಳಿಂದ ವಶಪಡಿಸಿಕೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಪಿ ದಿವ್ಯಾಸಾರಾ ಥಾಮಸ್‌ ಹಾಗು ಹೆಚ್ಚುವರಿ ಎಸ್ಪಿಕೆ.ಎಸ್‌. ಸುಂದರ್‌ ರಾಜ್‌, ಪೊಲೀಸ್‌ಉಪಾಧೀಕ್ಷಕರಾದ ಪ್ರಿಯದರ್ಶಿನಿಸಾಣೆಕೊಪ್ಪ ಮಾರ್ಗದರ್ಶನದಲ್ಲಿಚಾಮರಾಜನಗರ ಪಟ್ಟಣ ಪೊಲೀಸ್‌ಠಾಣೆ ಇನ್ಸ್‌ಪೆಕ್ಟರ್‌ರವರ ನೇತೃತ್ವದಲ್ಲಿಸಿಬ್ಬಂದಿ ತಂಡ ರಚಿಸಲಾಗಿತ್ತು

Advertisement

Udayavani is now on Telegram. Click here to join our channel and stay updated with the latest news.

Next