Advertisement

ಮಹನೀಯರ ತ್ಯಾಗ, ಬಲಿದಾನ ಸ್ಮರಿಸಿ: ಡೀಸಿ

04:22 PM Aug 16, 2021 | Team Udayavani |

ಚಾಮರಾಜನಗರ: ದೇಶದಸ್ವಾತಂತ್ರ್ಯಹೋರಾಟದಲ್ಲಿಜಿಲ್ಲೆಯಅನೇಕಹಿರಿಯರುಭಾಗವಹಿಸಿದ್ದುದೇಶಕ್ಕಾಗಿ ತಮ್ಮ ಸ್ವಹಿತ ಮರೆತು ತ್ಯಾಗ ಮಾಡಿದಅವರೆಲ್ಲರನ್ನೂ ನೆನಪಿಸಿಕೊಳ್ಳೋಣ ಎಂದುಜಿಲ್ಲಾಧಿಕಾರಿ ಡಾ. ಎಂ.ಆರ್‌.ರವಿ ಹೇಳಿದರು.

Advertisement

ನಗರದ ಜಿಲ್ಲಾ ಡಾ.ಬಿ.ಆರ್‌.ಅಂಬೇಡ್ಕರ್‌ನ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತವತಿಯಿಂದ ಭಾನುವಾರ ನಡೆದ75 ನೇ ಸ್ವಾತಂತ್ರ್ಯದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಬಲಿದಾನ: ಮಹಾತ್ಮಗಾಂಧಿ, ಬಾಲಗಂಗಾಧರ್‌ತಿಲಕ್‌, ಸುಭಾಷ್‌ ಚಂದ್ರಬೋಸ್‌,ಚಂದ್ರಶೇಖರ್‌ ಆಜಾದ್‌, ವಲ್ಲಭಬಾಯ್‌ ಪಟೇಲ್‌, ಜವಾಹರಲಾಲ್‌ ನೆಹರೂ,ಕಿತ್ತೂರು ರಾಣಿಚನ್ನಮ್ನ, ಝಾನ್ಸಿರಾಣಿ ಲಕ್ಷಿ ¾àಬಾಯಿ, ಸಂಗೊಳ್ಳಿರಾಯಣ್ಣ ಸೇರಿದಂತೆನೂರಾರುಮಹನೀಯರತ್ಯಾಗಬಲಿದಾನದಪರಿಣಾಮ ಭಾರತ75ನೇ ವರ್ಷದ ಸ್ವಾತಂತ್ರೊÂàತ್ಸವಕ್ಕೆಕಾಲಿಟ್ಟಿದ್ದೇವೆ ಎಂದರು.

ಅಗತ್ಯ ಸೌಲಭ್ಯ: ಕೋವಿಡ್‌ ನಿರ್ವಹಣೆಗಾಗಿನಗರದ ಜಿಲ್ಲಾಸ್ಪತ್ರೆಯಲ್ಲಿ 6 ಕೆಎಲ್‌ಒ ಸರ್ಕಾರಿವೈದ್ಯಕೀಯ ಕಾಲೇಜಿನಲ್ಲಿ 20 ಕೆಎಲ್‌ಎಲ್‌ಎಂಒಸಾಮರ್ಥ್ಯದ ಆಕ್ಸಿಜನ್‌ಟ್ಯಾಂಕ್‌ ನಿರ್ಮಿಸಲಾಗಿದೆ.ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಗಳಲ್ಲಿ 6 ಕೆ.ಎಲ್‌.ಸಾಮರ್ಥ್ಯದ ಆಕ್ಸಿಜನ್‌ ಟ್ಯಾಂಕ್‌ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮಂಜೂರಾತಿ ನೀಡಿದೆ.

ಸಂಸದರ ಪ್ರದೇಶಾಭಿವೃದ್ಧಿ ಅನುದಾನದಡಿ 1.5ಕೋಟಿ, ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿಅನುದಾನ2 ಕೋಟಿರೂ. ಸೇರಿ 3.5ಕೋಟಿರೂ.ವೆಚ್ಚದಲ್ಲಿ6 ಆ್ಯಂಬುಲೆನ್ಸ್‌, ಮಕ್ಕಳ ವೆಂಟಿಲೇಟರ್‌ಚಿಕಿತ್ಸಾ ಪರಿಕರ ಖರೀದಿಸಲಾಗಿದೆ. ಇದುವರಗೆಜಿಲ್ಲೆಯಲ್ಲಿ 4,75,234 ಫ‌ಲಾನುಭವಿಗಳಿಗೆಕೋವಿಡ್‌ ಲಸಿಕೆ ನೀಡಲಾಗಿದೆ ಎಂದು ತಮ್ಮಭಾಷಣದಲ್ಲಿ ಡೀಸಿ ತಿಳಿಸಿದರು.

Advertisement

ಜಿಲ್ಲೆಯಲ್ಲಿ ಘನತ್ಯಾಜ್ಯ ಘಟಕ ನಿರ್ಮಾಣಕ್ಕೆ3.30 ಎಕರೆ, ಸ್ಮಶಾನದ ಉದ್ದೇಶಕ್ಕೆ 36 ಎಕರೆ, ಗಣಿಭೂವಿಜ್ಞಾನ ನೂತನ ಕಟ್ಟಡ ನಿರ್ಮಾಣಕ್ಕೆ 2 ಎಕರೆ,ಮ್ಯೂಸಿಯಂ ಸ್ಥಾಪನೆಗೆ 31, ಕೊಳ್ಳೇಗಾಲ ಹಾಗೂಹನೂರುವಿಧಾನಸಭೆ ಕ್ಷೇತ್ರವ್ಯಾಪ್ತಿಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ 4ಎಕರೆ,ಜಿಲ್ಲೆಯಲ್ಲಿಪ್ರತ್ಯೇಕಹೆಲಿಪ್ಯಾಡ್‌ನಿರ್ಮಿಸಲು1.20 ಎಕರೆ ಜಮೀನು ನೀಡಲು ಜಿಲ್ಲಾಡಳಿತಮಂಜೂರಾತಿ ನೀಡಿದೆ ಎಂದರು. ಶಿಕ್ಷಣ ಕ್ಷೇತ್ರಕ್ಕೆಸಂಬಂಧಿಸಿದಂತೆ ಜಿಲ್ಲೆಗೆ ಹೊಸದಾಗಿ ಪ್ರತ್ಯೇಕ ವಿವಿಸ್ಥಾಪನೆಗೆ 50 ಎಕರೆ, ಹಂಪಿ ವಿವಿ ನಿಲಯದ ದೇಸಿಅಧ್ಯಯನ ಕೇಂದ್ರಕ್ಕೆ9.36ಎಕರೆ, ಸರ್ಕಾರಿ ಮಹಿಳಾವಸತಿಕಾಲೇಜು ನಿರ್ಮಾಣಕ್ಕೆ4.20ಎಕರೆಜಮೀನುಮಂಜೂರು ಮಾಡಲಾಗಿದೆ ಎಂದರು.

ಅಭಿನಂದನಾ ಪತ್ರ: ಇದಕ್ಕೂ ಮೊದಲು ಸಶಸ್ತ್ರಪಡೆಗಳು ಧ್ವಜ ವಂದನೆ ಸಲ್ಲಿಸಿದವು. ಕೋವಿಡ್‌ಹಿನ್ನೆಲೆ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆಅವಕಾಶ ಇರಲಿಲ್ಲ. ಇದೇ ವೇಳೆ ಆಯುಷ್ಮಾನ್‌,ಆರೋಗ್ಯಕರ್ನಾಟಕ ಸೇವೆಯನ್ನು ಉತ್ತಮವಾಗಿನಿರ್ವಹಿಸಿದ ಸಿಮ್ಸ್‌ ಡೀನ್‌, ಡಾ.ಎಂ.ಸಂಜೀವ್‌ರೆಡ್ಡಿ, ಸಂತೇಮರಹಳ್ಳಿ ಸಮುದಾಯ ಆರೋಗ್ಯಕೇಂದ್ರದ ಡಾ.ದೇವರಾಜ್‌, ಕಬ್ಬಹಳ್ಳಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಡಾ.ವೆಂಕಟೇಶ್‌ರಿಗೆ ಅಭಿನಂದನಾ ಪತ್ರ ನೀಡಲಾಯಿತು.

ಶಾಸಕ ಸಿ.ಪುಟ್ಟರಂಗಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಕಾತ್ಯಾಯಿನಿದೇವಿ, ನಗರಸಭೆ ಅಧ್ಯಕ್ಷೆ ಆಶಾ,ಉಪಾಧ್ಯಕ್ಷೆ ಸುಧಾ, ಚುಡಾ ಅಧ್ಯಕ್ಷ ಕೇಂದ್ರಪರಿಹಾರ ಸಮಿತಿ ಅಧ್ಯಕ್ಷ ಎಂ.ರಾಮಚಂದ್ರ, ಪಿ.ಬಿ.ಶಾಂತಮೂರ್ತಿಕುಲಗಾಣ, ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಹರ್ಷಲ್‌ಬೋಯರ್‌ ನಾರಾಯಣರಾವ್‌, ಜಿಲ್ಲಾಪೊಲೀಸ್‌ವರಿಷ್ಠಾಧಿಕಾರಿದಿವ್ಯಾಸಾರಾಥಾಮಸ್‌,ಎಎಸ್ಪಿ ಸುಂದರ್‌ ರಾಜ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next