Advertisement

ಚಾಮುಲ್‌ ಚುನಾವಣೆ: ಬಿಜೆಪಿ ಬೆಂಬಲಿತರಾಗಿ ಸುಜೇಂದ್ರ, ಡಿ.ಮಾದಪ್ಪ ನಾಮಪತ್ರ

02:49 PM Jun 07, 2022 | Team Udayavani |

ಚಾಮರಾಜನಗರ: ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟದ ಆಡಳಿತ ಮಂಡಲಿಯ ನಿರ್ದೇಶಕ ಸ್ಥಾನಕ್ಕೆ ಜೂ.14 ರಂದು ನಡೆಯಲಿರುವ ಚುನಾವಣೆಗೆ ಗುಂಡ್ಲುಪೇಟೆ ತಾಲೂಕಿನಿಂದ ಬಿಜೆಪಿ ಬೆಂಬಲಿತರಾಗಿ ಸುಜೇಂದ್ರ, ಡಿ. ಮಾದಪ್ಪ ಸೋಮವಾರ ನಾಮಪತ್ರ ಸಲ್ಲಿಸಿದರು.

Advertisement

ತಾಲೂಕಿನ ಕುದೇರಿನಲ್ಲಿ ಹಾಲು ಒಕ್ಕೂಟದ ಕಚೇರಿ ಸಭಾಂಗಣದಲ್ಲಿ ಚುನಾವಣಾಧಿಕಾರಿ ರಾಜೇಂದ್ರಪ್ರಸಾದ್‌ ಅವರಿಗೆ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು. ಕ್ಷೇತ್ರದ ಶಾಸಕ ಸಿ.ಎಸ್‌. ನಿರಂಜನ್‌ ಕುಮಾರ್‌ ಸೇರಿದಂತೆ ಬೆಂಬಲಿಗರು ಹಾಗೂ ಡೇರಿಯ ಅಧ್ಯಕ್ಷರು ಹಾಗೂ ನಿರ್ದೇಶಕರು ಇದ್ದರು.

ಬಳಿಕ ಮಾತನಾಡಿದ ಶಾಸಕ ಸಿ.ಎಸ್‌. ನಿರಂಜನ್‌ಕುಮಾರ್‌, ಜಿಲ್ಲಾ ಹಾಲು ಒಕ್ಕೂಟಕ್ಕೆ ನಡೆಯುವ ಚುನಾವಣೆಯ ಬಿಜೆಪಿ ಬೆಂಬಲಿತರಾದ 9 ಮಂದಿಯು ಸಹ ಜಯಗಳಿಸಿ, ಒಕ್ಕುಟವನ್ನು ಬಿಜೆಪಿ ವಶವಾಗಲಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮದೇ ಬಿಜೆಪಿ ಸರ್ಕಾರ ವಿದ್ದು, ಜನಪರ ಆಡಳಿತ ಮತ್ತು ರೈತ ಪರ ಯೋಜನೆಗಳಿಂದ ಪ್ರೇರಿತರಾಗಿರುವ ಜಿಲ್ಲೆಯ 400ಕ್ಕು ಹೆಚ್ಚು ಮತದಾರರು ಬಿಜೆಪಿ ಬೆಂಬಲಿತರನ್ನು ಗೆಲ್ಲಿಸಲು ನಿರ್ಧಾರ ಮಾಡಿದ್ದಾರೆ. ನಮ್ಮ ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಬೆಂಬಲಿತರು ಡೇರಿ ಅಧ್ಯಕ್ಷ ರಾಗಿದ್ದು, ಆಡಳಿತ ಮಂಡಲಿಯಲ್ಲಿಯು ಅವರ ಮೇಲುಗೈ ಸಾಧಿಸಿದ್ದಾರೆ. ಹೀಗಾಗಿ ಗುಂಡ್ಲುಪೇಟೆ ತಾಲೂಕಿ ನಿಂದ ಇಬ್ಬರು ಬಿಜೆಪಿ ಬೆಂಬಲಿತರು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚಾಮುಲ್‌ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಸುಜೇಂದ್ರ, ಡಿ.ಮಾದಪ್ಪ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಖಾತೆಗಳಿಗೆ ವರ್ಷಕ್ಕೆ ಎರಡು ಬಾರಿ ಹಣ ಜಮಾ ಮಾಡುತ್ತಿರುವುದು, ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರು ರೈತರ ಮಕ್ಕಳ ವಿದ್ಯಾ ಭ್ಯಾಸಕ್ಕಾಗಿ ವಿದ್ಯಾಸಿರಿ ಆರಂಭಿಸಿರುವುದು ಹೆಚ್ಚಿನ ಅನುಕೂಲವಾಗಿದೆ. ಈ ಎಲ್ಲಾ ಯೋಜನೆಗಳು ಮತ್ತು ರೈತ ಪರ ಸರ್ಕಾರವಾಗಿರುವ ಬಿಜೆಪಿಯನ್ನು ಗೆಲ್ಲಿಸಲಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ಮಂಡಲದ ಅಧ್ಯಕ್ಷ ಜಗದೀಶ್‌, ಚಾಮುಲ್‌ ನಿರ್ದೇಶಕ ಕಿಲಗೆರೆ ಶಶಿಕುಮಾರ್‌, ಯುವ ಮೋರ್ಚಾ ಅಧ್ಯಕ್ಷ ಪ್ರಣಯ್‌, ಮುಖಂಡರಾದ ಕೊಡಸೋಗೆ ಶಿವಬಸಪ್ಪ, ಶಿವಪುರ ಸುರೇಶ್‌, ಶಿವಮೂರ್ತಿ, ಪಿಎಲ್‌ಡಿ ಬ್ಯಾಂಕ ಅಧ್ಯಕ್ಷ ವರಿಯಾಲಮಹೇಶ್‌, ನಿಟ್ರೆ ನಾಗರಾಜಪ್ಪ, ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಮಲ್ಲಿಕಾರ್ಜುನಪ್ಪ, ಪ್ರಸಾದ್‌, ದೇವರಾಜು, ರಾಘಾವಪುರ ದೇವಯ್ಯ ಎಪಿಎಂಸಿ ನಿರ್ದೇಶಕ ರವಿ ಕ್ಷೇತ್ರ ವ್ಯಾಪ್ತಿಯ ಮುಖಂಡರು, ಡೇರಿ 40ಕ್ಕೂ ಹೆಚ್ಚು ಪ್ರತಿನಿಧಿಗಳು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next