Advertisement

ಕಾರ್ಮಿಕರ ಆರೋಗ್ಯ ತಪಾಸಣೆ

01:36 PM Apr 11, 2020 | Team Udayavani |

ಚಳ್ಳಕೆರೆ: ಹೆಗ್ಗೆರೆ ಗ್ರಾಮದ ಬಳಿಯ ಪ್ರಕಾಶ್‌ ಐರನ್‌ ಸ್ಪಾಂಜ್‌ ಖಾಸಗಿ ಕಂಪನಿಗೆ ಕೊರೊನಾ ವೈರಾಣು ನಿಯಂತ್ರಣ ಅಧಿಕಾರಿಗಳ ತಂಡ ಭೇಟಿ ನೀಡಿ ಹೊರ ರಾಜ್ಯದ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಿತು.

Advertisement

ಸಾಣಿಕೆರೆ ಪ್ರಾಥಮಿಕ ಕೇಂದ್ರದ ಆಡಳಿತಾಧಿಕಾರಿ ಡಾ| ಪಿ.ಎನ್‌.ನಾಗರಾಜು ಮಾತನಾಡಿ, ಕೊರೊನಾ ನಿಯಂತ್ರಣಕ್ಕೆ ಎಲ್ಲರ ಸಹಕಾರ ಅಗತ್ಯ. ಸರ್ಕಾರಿ ಅಥವಾ ಖಾಸಗಿ ಕಂಪನಿಗಳಲ್ಲಿ ಕಾರ್ಯನಿರ್ವಹಿಸುವ ಹೊರದೇಶದ ಯಾವುದೇ ವ್ಯಕ್ತಿಗಳಾಗಲಿ ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮೂಲಕ ಇದರ ನಿಯಂತ್ರಣಕ್ಕೆ ಮುಂದಾಗಬೇಕು ಎಂದರು. ಕಂಪನಿಯ ಪ್ರಭಾರ ವ್ಯವಸ್ಥಾಪಕ ರುದ್ರಪ್ಪ ಮಾತನಾಡಿ, ಸ್ಥಳೀಯವಾಗಿ 200, ರಾಜ್ಯದ ವಿವಿಧೆಡೆಯಿಂದ 400 ಜನ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಶೇಷವಾಗಿ ಉತ್ತರ ಪ್ರದೇಶ, ಮಹಾರಾಷ್ಟ್ರ, ಪಂಜಾಬ್‌, ಗುಜರಾತ್‌ ರಾಜ್ಯಗಳಿಂದ ಆಗಮಿಸಿದ ನೂರಾರು ಜನರು ಕಳೆದ ಸುಮಾರು 6 ತಿಂಗಳಿನಿಂದ ಇಲ್ಲಿನ ಕಾರ್ಯನಿರ್ವಸುತ್ತಿದ್ದಾರೆ. ಕಂಪನಿ ಇಲ್ಲಿಯೇ ಒಂದು ಆಸ್ಪತ್ರೆ ಪ್ರಾರಂಭಿಸಿದ್ದು, ಎಲ್ಲ ಸೌಲಭ್ಯವುಳ್ಳ ಆಂಬ್ಯುಲೆನ್ಸ್‌ ಸಹ ನಮ್ಮಲ್ಲಿದೆ ಎಂದರು. ತನಿಖಾ ತಂಡದಲ್ಲಿ ನಾಗರಾಜು, ಪ್ರಸನ್ನಕುಮಾರ್‌, ಎಚ್‌.ಬಿ. ತಿಪ್ಪೇಸ್ವಾಮಿ, ಮಂಜುನಾಥ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next