Advertisement

ಅಧಿಕಾರಿಗಳಿಗೆ ಹೂಮಳೆಗೈದ ಜನ

05:05 PM Apr 16, 2020 | Naveen |

ಚಳ್ಳಕೆರೆ: ಕೋವಿಡ್ ವೈರಾಣು ಹಿನ್ನೆಲೆಯಲ್ಲಿ ಪಥಸಂಚಲನದ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಪೊಲೀಸ್‌ ಇಲಾಖೆ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಸ್ವಯಂ ಪ್ರೇರಣೆಯಿಂದ ಸಾರ್ವಜನಿಕರು ಪೊಲೀಸ್‌ ಇಲಾಖೆಯ ಪಥಸಂಚಲದ ಮೇಲೆ ಹೂ ಮಳೆಗೈದು, ರಾಷ್ಟ್ರಧ್ವಜ ಹಿಡಿದು ಜೈಕಾರ ಹಾಕಿದರು.

Advertisement

ಇಲ್ಲಿನ ಬಸವೇಶ್ವರ ವೃತ್ತದಿಂದ ಪ್ರಾರಂಭವಾದ ಪಥಸಂಚಲನಕ್ಕೆ ಚಾಲನೆ ನೀಡಿ ಮಾತನಾಡಿದ ಉಪವಿಭಾಗದ ಡಿವೈಎಸ್ಪಿ ಎಸ್‌.ರೋಷನ್‌ ಜಮೀರ್‌, ಮಾರ್ಗದೂದ್ದಕ್ಕೂ ಸಾರ್ವಜನಿಕರು ಸ್ವಯಂ ಸೇವಾ ಸಂಸ್ಥೆಗಳು, ಮಕ್ಕಳು, ವಯೋವೃದ್ಧರು ಪುಷ್ಪಾರ್ಚನೆ ಮಾಡಿ ಕೈಮುಗಿಯುತ್ತಿದ್ದು, ನಮ್ಮ ಸೇವೆಗೆ ಸಾರ್ಥಕ ಭಾವನೆ ಮೂಡಿದೆ. ಜನರು ಹೂವನ್ನು ಎರಚುತ್ತಿದ್ದರೆ ನಮ್ಮೆಲ್ಲಾ ಕಣ್ಣಲ್ಲಿ ಆನಂದಬಾಷ್ಪ ನಮಗೆ ಅರಿವಿಲ್ಲದಂತೆ ಹೊರಗೆ ಬರುತ್ತಿತ್ತು ಎಂದರು. ತಹಶೀಲ್ದಾರ್‌ ಎಂ.ಮಲ್ಲಿಕಾರ್ಜುನ, ವೃತ್ತ ನಿರೀಕ್ಷಕ ಈ.ಆನಂದ, ಪೌರಾಯುಕ್ತ ಪಿ.ಪಾಲಯ್ಯ, ತಾಪಂ ಇಒ ಶ್ರೀಧರ್‌ ಐ.ಬಾರಿಕೇರ್‌, ಆರೋಗ್ಯಾಧಿಕಾರಿ ಡಾ| ಎನ್‌.ಪ್ರೇಮಸುಧಾ, ಪಿಎಸ್‌ ಐಗಳಾದ ನೂರ್‌ ಆಹಮ್ಮದ್‌, ರಾಘವೇಂದ್ರ ಮುಂತಾದವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next