Advertisement

ಸ್ವಾಭಿಮಾನವಿದ್ದರೆ ಸಚಿವ ಸ್ಥಾನಕ್ಕೆ ಮಹಾದೇವಪ್ಪ ರಾಜೀನಾಮೆ ನೀಡಲಿ: ನಾರಾಯಣಸ್ವಾಮಿ

01:22 PM Mar 16, 2024 | Team Udayavani |

ವಿಜಯಪುರ : ದಲಿತರಿಗೆ ಮೀಸಲಿಟ್ಟಿದ್ದ 25 ಸಾವಿರ ಕೋಟಿ ಹಣವನ್ನು ದಲಿತರಿಗೆ ಕಾಂಗ್ರೆಸ್ ಸರ್ಕಾರ ಮೋಸ ಮಾಡಿದ್ದರೂ ಧ್ವನಿ ಎತ್ತದೇ ದಲಿತ ಸಂಘಟನೆಗಳು ಎಲ್ಲಿ ಹೋದವು. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಲೇ ದಲಿತ ಸಂಘಟನೆಗಳ ಧ್ವನಿಯೇ ಅಡಗಿಹೋಗಿದೆ. ದಲಿತ ಸಂಘಟನೆಗಳು ಈಗ ಎಲ್ಲಿ ಹೋಗಿವೆ ಹುಡುಕಿ ಕೊಡಿ ಎಂದು ಬಿಜೆಪಿ ವಕ್ತಾರ ಛಲವಾದಿ ನಾರಾಯಣಸ್ವಾಮಿ ಕುಟುಕಿದ್ದಾರೆ.

Advertisement

ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತರ ಬಗ್ಗೆ ಬಹಳ ಮಾತನಾಡುವ ಸಿದ್ಧರಾಮಯ್ಯ ದಲಿತರಿಗೆ ಮೀಸಲಿದ್ದ ಎಸ್‍ಇಪಿ-ಟಿಎಸ್‍ಪಿ ಹಣ ಬೇರೆ ಯಾವುದಕ್ಕೋ ಬಳಸಿಕೊಂಡಿದ್ದಾರೆ. ಇಷ್ಟಾದರೂ ಒಂದಿಬ್ಬರನ್ನು ಬಿಟ್ಟರೆ ದಲಿತ ಸಂಘಟನೆಗಳು, ಮುಖಂಡರು ಬಾಯಿ ಮುಚ್ಚಿಕೊಂಡಿರುವುದೇಕೆ ಎಂದು ಅವರೇ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.

ಓಟ್ ನಮ್ಮದು ನಾಯಕತ್ವ ಅವರದು ಎಂದು ಸಚಿವ ಮಹಾದೇವಪ್ಪ ಈಗ ಮಾತನಾಡುತ್ತಿದ್ದಾರೆ. ಈ ಹಿಂದೆ ಸಿದ್ಧರಾಮಯ್ಯ ಅವರಿಗೆ ನಮ್ಮ ಸಮುದಾಯಕ್ಕೂ ಎರಡೂವರೆ ವರ್ಷ ಮುಖ್ಯಮಂತ್ರಿ ಅವಕಾಶ ಕೊಡಿ ಎಂದು ನಾನು ಧ್ವನಿ ಎತ್ತಿದಾಗ ಇದೇ ಮಹದೇವಪ್ಪ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ ಎನ್ನುವ ಮೂಲಕ ಸಿದ್ಧರಾಮಯ್ಯ ಅವರನ್ನು ಬೆಂಬಲಿಸಿದ್ದರು ಎಂದು ತಿರುಗೇಟು ನೀಡಿದ್ದಾರೆ.

ಸಿದ್ದಾರಾಮಯ್ಯ-ಮಹಾದೇವಪ್ಪ ಮಧ್ಯೆ ಸಂಬಂಧ ಹಳಸಿರುವ ಕಾರಣಕ್ಕೆ ದಲಿತರು ಓಟ್ ಬ್ಯಾಂಕ್ ಎಂದು ಧ್ವನಿ ಎತ್ತಿದ್ದಾರೆ. ಮಹಾದೇವಪ್ಪ ಅವರಿಗೆ ಸ್ವಾಭಿಮಾನವಿದ್ದರೆ ಕಾಂಗ್ರೆಸ್ ಸರ್ಕಾರದಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿಯಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಬರಲಿ ಎಂದು ಆಗ್ರಹಿಸಿದರು.

ಕಾಂಗ್ರೆಸ್ ಪಕ್ಷದ ಸ್ವಾತಂತ್ರ್ಯಾ ನಂತರ ಕರ್ನಾಟಕದಲ್ಲಿ ದಲಿತರನ್ನು ಓಟ್ ಬ್ಯಾಂಕ್ ಮಾಡಿಕೊಂಡೇ ಬಂದಿದೆ. ಬಿ.ಬಸವಲಿಂಗಪ್ಪ, ಕೆ.ಎಚ್.ರಂಗನಾಥ, ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ, ಬಿ.ರಾಚಯ್ಯ ಅವರಂಥ ನಾಯಕರಿಗೆ ಮುಖ್ಯಮಂತ್ರಿ ಆಗುವ ಅವಕಾಶವನ್ನು ಕಾಂಗ್ರೆಸ್ ತಪ್ಪಿಸಿದೆ ಎಂದು ಕಿಡಿ ಕಾರಿದರು.

Advertisement

ಐಎನ್‍ಡಿಐಎ ಒಕ್ಕೂಟದಿಂದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಿಸುತ್ತಲೇ ವಿರೋಧಿಸಿದ್ದು ಇದೇ ಸಿದ್ಧರಾಮಯ್ಯ. ಡಾ.ಬಿ.ಆರ್.ಅಂಬೇಡ್ಕರ್ ಅವರನ್ನೇ ಅಂತ್ಯ ಕಾಲದಲ್ಲೂ ಅತ್ಯಂತ ಅವಮಾನಕರ ರೀತಿಯಲ್ಲಿ ನಡೆಸಿಕೊಂಡ ಕಾಂಗ್ರೆಸ್ ಇದೀಗ ಖರ್ಗೆ ಅವರನ್ನು ನಿಮ್ಮ ಮನೆ ಬಾಗಿಲು ಕಾಯಲು ಇರಿಸಿಕೊಂಡಿದೆ ಎಂದು ಟೀಕಿಸಿದರು.

ನಿಜಕ್ಕೂ ಡಾ.ಮಹದೇವಪ್ಪ ಅವರಿಗೆ ದಲಿತರ ಬಗ್ಗೆ ಕಾಳಜಿ ಇದ್ದರೆ ಸರ್ಕಾರದಿಂದ ಹೊರ ಬರಬೇಕು, ಇಲ್ಲವಾದಲ್ಲಿ ಓರ್ವ ಸ್ವಾರ್ಥಿ ಎನಿಸಿಕೊಳ್ಳಲಿದ್ದಾರೆ ಎಂದ ಚಲವಾದಿ ನಾರಾಯಣಸ್ವಾಮಿ, ಬಿಹಾರದಲ್ಲಿ ದಲಿತ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡಿದ್ದು ನಮ್ಮದೇ ಬಿಜೆಪಿ ಪಕ್ಷ ಎಂದು ಸಮರ್ಥಸಿಕೊಂಡದರು.

ಇದನ್ನೂ ಓದಿ: Jammu-Kashmir ಅಂದು-ಇಂದು: ಕಾಶ್ಮೀರಿ ಜನರ ಮನಸ್ಥಿತಿ ಈಗ ಹೇಗಿದೆ ಗೊತ್ತಾ?

Advertisement

Udayavani is now on Telegram. Click here to join our channel and stay updated with the latest news.

Next