Advertisement

ಪಾಲಿಕೆ ಸ್ಥಾಯಿ ಸಮಿತಿಗೆ ಅಧ್ಯಕ್ಷರ ಆಯ್ಕೆ

05:23 AM Jan 12, 2019 | |

ಕಲಬುರಗಿ: ಮಹಾನಗರ ಪಾಲಿಕೆ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆ ನಗರದ ಇಂದಿರಾ ಸ್ಮಾರಕ ಭವನದಲ್ಲಿ ನಡೆಯಿತು. ಪಾಲಿಕೆಯ ಕರ, ಹಣಕಾಸು ಮತ್ತು ಮೇಲ್ಮನವಿ ಸ್ಥಾಯಿ ಸಮಿತಿಯ ಅಧ್ಯಕ್ಷ ರಮೇಶ ಟಿ. ಕಮಕನೂರ, ಸಾರ್ವಜನಿಕ ಆರೋಗ್ಯ ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಮಹ್ಮದ್‌ ಅಜಮಲ್‌ ಗೋಳಾ, ಪಾಲಿಕೆ ನಗರ ಯೋಜನೆ ಹಾಗೂ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ರಾಜಕುಮಾರ ಎಚ್. ಕಪನೂರ ಅವರನ್ನು ಆಯ್ಕೆ ಮಾಡಲಾಯಿತು.

Advertisement

ಇದೇ ವೇಳೆ ಪಾಲಿಕೆಯಿಂದ ಕುಡಾ ಸದಸ್ಯರಾಗಿ ರಹೀಂಮುಲ್ಲಾ, ಪಾಲಿಕೆ ಆಡಳಿತ ಪಕ್ಷದ ನಾಯಕರಾಗಿ ಸಲೀಂ ಭಾಯ್‌ ಅವರನ್ನು ಆಯ್ಕೆ ಮಾಡಲಾಯಿತು. ಸ್ಥಾಯಿ ಸಮಿತಿ ಅಧ್ಯಕ್ಷರು, ಕುಡಾ ಸದಸ್ಯರು ಹಾಗೂ ಆಡಳಿತ ಪಕ್ಷದ ನಾಯಕರಾಗಿ ಆಯ್ಕೆಯಾದವರಿಗೆ ಪಾಲಿಕೆ ಮೇಯರ್‌ ಮಲ್ಲಮ್ಮ ಸಿದ್ದರಾಮಪ್ಪ ವಳಕೇರಿ, ಉಪಮೇಯರ್‌ ಆಲಿಯಾ ಸಿರೀನ್‌ ಹೂಗುಚ್ಛ ನೀಡಿ ಸನ್ಮಾನಿಸಿದರು.

ಮಜರ್‌ ಆಲಂ ಖಾನ್‌, ಗಣೇಶ ವಳಕೇರಿ, ವಾಹೇದ್‌ ಅಲಿ ಫಾತೇಖಾನ್‌, ಹುಲಿಗೆಪ್ಪ ಕನಕಗಿರಿ, ಮಹೇಶ ಹೋಸೂರಕರ್‌, ಜಾವೀದ್‌ ಎನ್‌ಆರ್‌ಐ, ಅಸ್ಫಕ್‌ ಅಹ್ಮದ್‌ ಚುಲಬುಲ್‌, ರಾಜಶ್ರೀ ಜಾಧವ, ಈರಣ್ಣ ಹೊನ್ನಳ್ಳಿ, ಶಂಕರಸಿಂಗ್‌, ಈರಣ್ಣ ಝಳಕಿ, ಶಫಿ ಹುಂಡೇಕಾರ ಹಾಗೂ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next