Advertisement

ಹೊಸಪೇಟೆ: ಪತಿಯೊಂದಿಗೆ ವಾಕಿಂಗ್‌ ಹೋಗುತ್ತಿದ್ದ ವೃದ್ಧೆಯ ಮಾಂಗಲ್ಯ ಸರ ಕಿತ್ತೊಯ್ದ ಸರಗಳ್ಳರು

08:13 PM Jun 06, 2022 | Team Udayavani |

ಹೊಸಪೇಟೆ: ಪತಿಯೊಂದಿಗೆ ವಾಕಿಂಗ್ ತೆರಳಿದ್ದ ವೃದ್ಧ ಮಹಿಳೆಯೊಬ್ಬರ ಬೆಲೆ ಬಾಳುವ ಮಾಂಗಲ್ಯ ಸರವನ್ನು ಸರಗಳ್ಳರು ಕಿತ್ತೊಯ್ದ ಘಟನೆ ನಗರದ ಆಕಾಶವಾಣಿಯ ಮದಕರಿ ನಾಯಕ ಶಾಲೆಯ ಹತ್ತಿರ ಸೋಮವಾರ ( ಜೂ.6 ರಂದು) ನಡೆದಿದೆ.

Advertisement

ನಗರದ ನಿವಾಸಿ ದತ್ತಾತ್ರೇಯ ಎಂಬುವರು ಪತ್ನಿಯೊಂದಿಗೆ ವಾಕಿಂಗ್ ತೆರಳಿದ್ದಾಗ ಮಂಕಿಕ್ಯಾಪ್ ಧರಿಸಿ, ಪಲ್ಸರ್ ಬೈಕ್‌ನಲ್ಲಿ ಬಂದ ಸರಗಳ್ಳರು, ಮಹಿಳೆಯ ಕೊರಳಲ್ಲಿದ್ದ ಸುಮಾರು 35 ಗ್ರಾಂ ತೂಕದ 1,20,000 ರೂ. ಬೆಲೆ ಬಾಳುವ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಚೈನ್ ಕಿತ್ತುಕೊಂಡ ಹೋದ ರಭಸದಲ್ಲಿ ಮಹಿಳೆ ನೆಲಕ್ಕುರುಳಿ ಬಿದ್ದು ಗಾಯಗೊಂಡಿದ್ದಾರೆ.

ನಗರದ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next