Advertisement

ಮಲ್ಪೆ: ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಸರಕಳ್ಳ

11:16 PM Nov 03, 2022 | Team Udayavani |

ಮಲ್ಪೆ: ಮಹಿಳೆಯ ಕತ್ತಿನಿಂದ ಸರ ಕದಿಯಲು ಯತ್ನಿಸಿ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಸರಗಳ್ಳನಿಗೆ ಸಾರ್ವಜನಿಕರು ಧರ್ಮದೇಟು ನೀಡಿ ಬಳಿಕ ಪೊಲೀಸರಿಗೆ ಒಪ್ಪಿಸಿದ ಘಟನೆ ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಗುರುವಾರ ಮುಂಜಾನೆ 5 ಗಂಟೆ ವೇಳೆಗೆ ಸಂಭವಿಸಿದೆ.

Advertisement

ಗುಜ್ಜರಬೆಟ್ಟುವಿನ ಪ್ರಭಾಕರ ಕುಂದರ್‌ (47) ಎಂಬಾತ ಸೆರೆ ಸಿಕ್ಕ ಆರೋಪಿ. ಈತ ನಸುಕಿನ ವೇಳೆ ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದ. ಮೀನು ಖರೀದಿಗೆಂದು ಬಂದರಿಗೆ ಬರುತ್ತಿದ್ದ ಒಣಮೀನು ವ್ಯಾಪಾರಸ್ಥೆ ಗುಲಾಬಿ ಅವರ ಕಣ್ಣಿಗೆ ಮೆಣಸಿನ ಹುಡಿ ಹಾಕಿ ಕೊರಳಿನಲ್ಲಿದ್ದ ಸರವನ್ನು ಕಸಿಯಲು ಯತ್ನಿಸಿದ.

ಈ ವೇಳೆ ಮಹಿಳೆಯು ಕಿರುಚಿಕೊಂಡಿದ್ದರಿಂದ ಸಮೀಪದಲ್ಲಿದ್ದವರು ತತ್‌ಕ್ಷಣ ಓಡಿ ಬಂದು ಆತನನ್ನು ಹಿಡಿದು ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next