Advertisement

ಸಿಇಟಿ ರ್‍ಯಾಂಕ್‌ ಎಂಜಿನಿಯರಿಂಗ್‌ಗೆ ಮಾತ್ರ ಸೀಮಿತವಲ್ಲ!

11:12 PM May 12, 2019 | Team Udayavani |

* ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ರ್‍ಯಾಂಕ್‌ ಕೇವಲ ಎಂಜಿನಿಯರಿಂಗ್‌ ಸೀಟಿಗೆ ಸೀಮಿತವಾಗಿರದೆ, ಅಭ್ಯರ್ಥಿಗಳ ಆಯ್ಕೆಯಂತೆ ವಿವಿಧ ಬಿ.ಎಸ್ಸಿ, ಬಿ.ಟೆಕ್‌ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

Advertisement

* ಸಿಇಟಿ ನಡೆಸುವುದು ಎಂಜಿನಿಯರಿಂಗ್‌ ಸೀಟು ಹಂಚಿಕೆಗೆ ಮಾತ್ರವಲ್ಲ. ಅದರ ಜತೆಗೆ ಇನ್ನು ಹಲವು ಕೋರ್ಸ್‌ಗಳ ಸೀಟು ಹಂಚಿಕೆಯನ್ನು ಸಿಇಟಿ ರ್‍ಯಾಂಕ್‌ ಆಧಾರದಲ್ಲೇ ನಡೆಸಲಾಗುತ್ತದೆ.

* ರಾಜ್ಯದ ಸರ್ಕಾರಿ, ವಿಶ್ವವಿದ್ಯಾಲಯ, ಖಾಸಗಿ ಅನುದಾನಿತ, ಅನುದಾನ ರಹಿತ ವೃತ್ತಿ ಶಿಕ್ಷಣ ಸಂಸ್ಥೆಗಳಲ್ಲಿರುವ ಎಂಜಿನಿಯರಿಂಗ್‌, ತಂತ್ರಜ್ಞಾನ, ಕೃಷಿ ವಿಜ್ಞಾನದ ಕೋರ್ಸ್‌ಗಳಾದ ಬಿ.ವಿ.ಎಸ್ಸಿ ಹಾಗೂ ಪಶು ವೈದ್ಯಕೀಯ ಮತ್ತು ಪಶುಸಂಗೋಪನೆ, ಬಿ.ಎಸ್ಸಿ (ಆನರ್ಸ್‌)-ಕೃಷಿ, ಅರಣ್ಯ ವಿಜ್ಞಾನ, ಬಿ.ಎಸ್ಸಿ(ಆನರ್ಸ್‌) ರೇಷ್ಮೆ ಕೃಷಿ, ಬಿ.ಎಸ್ಸಿ (ಆನರ್ಸ್‌) ತೋಟಗಾರಿಕೆ, ಬಿಎಸ್ಸಿ (ಆನರ್ಸ್‌) ಕೃಷಿ ಜೈವಿಕ ತಂತ್ರಜ್ಞಾನ, ಬಿ.ಎಸ್ಸಿ (ಆನರ್ಸ್‌)ಸಮುದಾಯ ವಿಜ್ಞಾನ, ಬಿ.ಟೆಕ್‌-ಕೃಷಿ ಎಂಜಿನಿಯರಿಂಗ್‌, ಬಿ.ಟೆಕ್‌ -ಬಯೊ ಟೆಕ್ನಾಲಜಿ, ಬಿ.ಟೆಕ್‌- ಹೈನುಗಾರಿಕೆ ತಂತ್ರಜ್ಞಾನ, ಬಿಎಫ್ಎಸ್ಸಿ-ಮೀನುಗಾರಿಕೆ, ಬಿ.ಟೆಕ್‌-ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ, ಬಿಎಸ್ಸಿ- ಕೃಷಿ ಮಾರುಕಟ್ಟೆ ಮತ್ತು ಸಹಕಾರ, ಬಿ-ಫಾರ್ಮಾ, ಡಿ-ಫಾರ್ಮ ಕೋರ್ಸುಗಳಲ್ಲಿ ಲಭ್ಯವಿರುವ ಸರ್ಕಾರಿ ಕೋಟದ ಸೀಟುಗಳಿಗೆ ಮೊದಲ ವರ್ಷದ ಮೊದಲ ಸೆಮಿಸ್ಟರ್‌ಗೆ ಹಂಚಿಕೆ ಮಾಡಲಾಗುತ್ತದೆ.

* ಸಿಇಟಿ ರ್‍ಯಾಂಕಿಂಗ್‌ ಆಧಾರದಲ್ಲಿ ಈ ಎಲ್ಲ ಕೋರ್ಸ್‌ಗಳ ಸೀಟು ಹಂಚಿಕೆ ನಡೆಯುವುದರಿಂದ ಎಂಜಿನಿಯರಿಂಗ್‌ ಸೀಟು ಕೈ ತಪ್ಪಿದ ಮಾತ್ರಕ್ಕೆ ಸಿಇಟಿ ಬರೆದಿರುವುದು ವ್ಯರ್ಥವಾಯಿತು ಎಂದುಕೊಳ್ಳುವ ಅಗತ್ಯವಿಲ್ಲ. ಎಂಜಿನಿಯರಿಂಗ್‌ ಹೊರತಾಗಿಯೂ ಹಲವು ಕೋರ್ಸ್‌ಗಳಿಗೆ ಸಿಇಟಿ ರ್‍ಯಾಂಕ್‌ ಆಧಾರದಲ್ಲಿ ಸೀಟು ಪಡೆದು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬಹುದಾಗಿದೆ.

* ಕೃಷಿ ವಿಜ್ಞಾನ ಕೋರ್ಸ್‌ಗಳಿಗೆ ಸಂಬಂಧಿಸಿದಂತೆ ಕೃಷಿಕ ಕುಟುಂಬದ ಕೋಟದ ಅಡಿ ಸೀಟು ಆಯ್ಕೆ ಬಯಸುವ ಅಭ್ಯರ್ಥಿಗಳಿಗೆ ಕೃಷಿಗೆ ಸಂಬಂಧಿಸಿದಂತೆ ಮಾದರಿಗಳನ್ನು ಗುರುತಿಸಲು ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಲಾಗಿರುತ್ತದೆ. ಅದರಲ್ಲಿ ಉತ್ತಮ ಅಂಕ ಪಡೆದರೆ, ಸುಲಭವಾಗಿ ಕೃಷಿ ವಿಜ್ಞಾನ ಸೀಟು ಪಡೆಯಬಹುದಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next