Advertisement

ಆಂಧ್ರಪ್ರದೇಶ ಶತಮಾನಗಳ ಇತಿಹಾಸ ಇರುವ ದೇವಾಲಯದ ರಥಕ್ಕೆ ಬೆಂಕಿ; ಕಾರಣ ನಿಗೂಢ

03:47 PM Sep 06, 2020 | sudhir |

ಅಮರಾವತಿ ; ಆಂಧ್ರ ಪ್ರದೇಶದ ಶತಮಾನಗಳ ಹಳೆಯ ದೇವಾಲಯವಾದ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿರುವ ಮರದ ರಥ ಬೆಂಕಿಗೆ ಆಹುತಿಯಾಗಿದೆ ಎಂದು ದೇವಾಲಯದ ಆಡಳಿತ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಆಂದ್ರಪ್ರದೇಶದ ಪೂರ್ವ ಗೋದಾವರಿಯಲ್ಲಿರುವ ಪುರಾತನ ಪ್ರಸಿದ್ಧ ದೇವಾಲಯವಾದ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿರುವ 40 ಅಡಿ ಎತ್ತರದ ಮರದ ರಥವೊಂದು ಬೆಂಕಿಗೆ ಆಹುತಿಯಾದ ಘಟನೆ ರವಿವಾರ ಮುಂಜಾನೆ ಸಂಭವಿಸಿದೆ.

ಮರದ ರಥ ದೇವಳದ ಅವರದಲ್ಲಿರುವ ಕೊಠಡಿಯಲ್ಲಿ ನಿಲ್ಲಿಸಲಾಗಿತ್ತು ಆದರೆ ರವಿವಾರ ಮುಂಜಾನೆ 1 ಗಂಟೆಯಿಂದ ಮೂರು ಗಂಟೆಯ ಅವಧಿಯಲ್ಲಿ ಈ ಕೃತ್ಯ ನಡೆದಿದೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸ್ ಅಧಿಕಾರಿಗಳ ತಂಡ ಭೇಟಿ ನೀಡಿದ್ದು ಘಟನೆಯ ಕುರಿತು ತನಿಖೆಗೆ ಮುಂದಾಗಿದ್ದಾರೆ,
ಶತಮಾನಗಳಷ್ಟು ಹಳೆಯದಾದ ಈ ರಥವನ್ನು ದೇವಸ್ಥಾನದ ವಿಶೇಷ ದಿನಗಳ ಸಂದರ್ಭ ರಥೋತ್ಸವಕ್ಕೆ ಹೊರಕ್ಕೆ ತರಲಾಗುತ್ತದೆ. ಆದರೆ ಕಳೆದ ಏಪ್ರಿಲ್ ತಿಂಗಳಲ್ಲಿ ರಥವನ್ನು ಶೆಡ್ ನಿಂದ ಹೊರಗಡೆ ತಂದಿದ್ದು ಆ ಬಳಿಕ ರಥವನ್ನು ದೇವಸ್ಥಾನದ ರಥದ ಶೆಡ್ ನಲ್ಲಿ ಇಡಲಾಗಿತ್ತು ಯಾರೋ ಕಿಡಿಗೇಡಿಗಳು ರಥಕ್ಕೆ ಬೆಂಕಿ ಹಚ್ಚಿದ್ದು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪೊಲೀಸರಲ್ಲಿ ದೇವಾಲಯದ ಆಡಳಿತ ಮಂಡಳಿ ಮನವಿ ಮಾಡಿದೆ.

ತೇಗದ ಮರದಿಂದ ನಿರ್ಮಾಣ ಮಾಡಿರುವ ಈ ರಥವು ಶತಮಾನಗಳ ಇತಿಹಾಸವನ್ನು ಹೊಂದಿದೆ.

Advertisement

ಪೋಲೀಸರ ಹೇಳಿಕೆಯಂತೆ ರಥಕ್ಕೆ ಬೆಂಕಿ ಹೇಗೆ ಹಿಡಿಯಿತು ಎಂದು ತನಿಖೆ ನಡೆಸುತ್ತಿದ್ದೇವೆ, ಶಾರ್ಟ್ ಸರ್ಕ್ಯೂಟ್ ನಿಂದ ಸಂಭವಿಸಿರ ಬಹುದೋ ಅಥವಾ ಬೇರೆ ಯಾರಾದರೂ ಕಿಡಿಗೇಡಿಗಳು ಈ ಕೃತ್ಯವನ್ನು ಎಸಗಿದ್ದಾರೋ ಎಂಬ ಎರಡು ಆಯಾಮಗಳಲ್ಲಿ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ, ಕಳೆದ ಕೆಲವು ತಿಂಗಳ ಹಿಂದೆ ಆಂಧ್ರಪ್ರದೇಶದ ನೆಲ್ಲೂರು ತಾಲೂಕಿನಲ್ಲಿ ಮಾನಸಿಕ ಅಸ್ವಸ್ತನೊಬ್ಬ ದೇವಸ್ಥಾನದ ರಥಕ್ಕೆ ಬೆಂಕಿ ಹಚ್ಚಿದ್ದ ಘಟನೆಯೂ ಇದೆ ಹಾಗಾಗಿ ಎಲ್ಲಾ ಆಯಾಮಗಳಲ್ಲೂ ತನಿಖೆಯನ್ನು ನಡೆಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next