Advertisement

New pension scheme ಘೋಷಿಸಿದ ಕೇಂದ್ರ: ನೌಕರರಿಗೆ ಖಚಿತವಾದ ಕನಿಷ್ಠ ನಿಧಿ

09:02 PM Aug 24, 2024 | Team Udayavani |

ಹೊಸದಿಲ್ಲಿ: ಕೇಂದ್ರ ಸರಕಾರ ಶನಿವಾರ(ಆ 24) ಏಕೀಕೃತ ಪಿಂಚಣಿ ಯೋಜನೆ ( Unified Pension Scheme) ಎಂಬ ಹೊಸ ಪಿಂಚಣಿ ಯೋಜನೆಯನ್ನು ಘೋಷಿಸಿದೆ. ಇದರಲ್ಲಿ ಕೇಂದ್ರ ಸರಕಾರಿ ನೌಕರರು ಖಚಿತವಾದ ಪಿಂಚಣಿ, ಕುಟುಂಬ ಪಿಂಚಣಿ ಮತ್ತು ಖಚಿತವಾದ ಕನಿಷ್ಠ ಪಿಂಚಣಿಯನ್ನು ಪಡೆಯುತ್ತಾರೆ.ಹೊಸ ಪಿಂಚಣಿ ಯೋಜನೆ 2025 ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ.

Advertisement

ಕೇಂದ್ರ ಸಚಿವ ಸಂಪುಟವು ಅನುಮೋದಿಸಿದ ಈ ಯೋಜನೆಯು ಕಳೆದ 12 ತಿಂಗಳುಗಳಲ್ಲಿ ಪಡೆದ ಸರಾಸರಿ ಮೂಲ ವೇತನದ ಶೇಕಡಾ 50 ರಷ್ಟು ಪಿಂಚಣಿಯನ್ನು ಖಾತರಿಪಡಿಸಲಿದೆ. ಉದ್ಯೋಗಿ ಕನಿಷ್ಠ 25 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ್ದರೆ ಕಡಿಮೆ ಸೇವೆ ಹೊಂದಿರುವವರಿಗೆ, ಪಿಂಚಣಿ ಪ್ರಮಾಣಾನುಗುಣವಾಗಿ ಲಭ್ಯವಾಗುತ್ತದೆ. ನೌಕರನ ಮರಣದ ಮೊದಲು ಪಿಂಚಣಿಯ ಶೇಕಡಾ 60 ರಷ್ಟು ಕುಟುಂಬ ಪಿಂಚಣಿಯನ್ನು ಖಚಿತಪಡಿಸಲಿದೆ.

ಈ ಯೋಜನೆಯು ಕನಿಷ್ಟ 10 ವರ್ಷಗಳ ಸೇವೆಯ ನಂತರ ನಿವೃತ್ತಿಯ ಮೇಲೆ ತಿಂಗಳಿಗೆ 10,000 ರೂ.ಗಳ ಖಚಿತವಾದ ಕನಿಷ್ಠ ಪಿಂಚಣಿಯನ್ನು ಖಾತರಿಪಡಿಸಲಿದೆ.

ಸುಮಾರು 23 ಲಕ್ಷ ಕೇಂದ್ರ ಸರಕಾರಿ ನೌಕರರು UPSನಿಂದ ಪ್ರಯೋಜನ ಪಡೆಯಲಿದ್ದಾರೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.”ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಮತ್ತು UPS ನಡುವೆ ಉದ್ಯೋಗಿಗಳಿಗೆ ಆಯ್ಕೆ ಮಾಡಲು ಅವಕಾಶವಿದೆ” ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.

ಈ ಯೋಜನೆಯಡಿಯಲ್ಲಿ, ಗ್ರಾಚ್ಯುಟಿ ಜತೆಗೆ ಹೆಚ್ಚುವರಿ ಮೊತ್ತದ ಪಾವತಿ ಮತ್ತು ಮಾಸಿಕ ವೇತನದ ಹತ್ತನೇ ಒಂದು ಭಾಗ (ಪೇ + ಡಿಎ (Dearness Allowance)) ಪ್ರತಿ ಪೂರ್ಣಗೊಂಡ ಆರು ತಿಂಗಳ ಸೇವೆಗೆ ನಿವೃತ್ತಿಯ ದಿನಾಂಕದಂದು ಸಿಗುತ್ತದೆ. ಈ ಪಾವತಿಯು ಉದ್ಯೋಗಿಗಳಿಗೆ ಖಚಿತವಾದ ಪಿಂಚಣಿ ಪ್ರಮಾಣವನ್ನು ಕಡಿಮೆ ಮಾಡುವುದಿಲ್ಲ.

Advertisement

OPS ವೇತನ ಆಯೋಗದ ಶಿಫಾರಸುಗಳ ಆಧಾರದ ಮೇಲೆ ಹೊಂದಾಣಿಕೆಗಳೊಂದಿಗೆ ಜೀವನಕ್ಕಾಗಿ ಉದ್ಯೋಗಿ ಪಡೆಯುವ ಕೊನೆಯ ಸಂಬಳದ ಅರ್ಧದಷ್ಟು ಪಿಂಚಣಿ ಖಾತರಿಪಡಿಸುವ ಯೋಜನೆಯಾಗಿದೆ.NPS ನಲ್ಲಿ ಸರಕಾರಿ ನೌಕರರು ತಮ್ಮ ಮೂಲ ವೇತನದ 10% ಅನ್ನು ಕೊಡುಗೆ ನೀಡಿದರೆ ಸರಕಾರವು 14% ಕೊಡುಗೆಯನ್ನು ಹೊಂದಿಸುತ್ತದೆ.

ಪ್ರಧಾನಿ ಮೋದಿ ಅವರು ಕೇಂದ್ರ ಸರಕಾರಿ ನೌಕರರ ಜಂಟಿ ಸಲಹಾ ನಿಯೋಗವನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ನಿಯೋಗ ಅಭಿನಂದನೆ ಸಲ್ಲಿಸಿತು.

ಕೇಂದ್ರ ಸರಕಾರವು ಈ ಹಿಂದೆ ಉದ್ಯೋಗಿಗಳಿಗೆ ಹಳೆಯ ಪಿಂಚಣಿ ಯೋಜನೆಯನ್ನು (OPS) ಜಾರಿಗೆ ತರಲು ಯಾವುದೇ ತತ್ ಕ್ಷಣದ ಯೋಜನೆಗಳಿಲ್ಲ ಎಂದು ಹೇಳಿತ್ತು. ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳಲ್ಲಿ ಅನುಷ್ಠಾನಕ್ಕೆ ಒತ್ತಾಯಿಸಿ ಪ್ರತಿಭಟನೆಗಳೂ ನಡೆದಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next