Advertisement

ಪ್ರವಾಸಿಗರೆ ಗಮನಿಸಿ: ಮೇ 15ರವರೆಗೆ ಎಲ್ಲ ಸ್ಮಾರಕಗಳೂ ಬಂದ್‌

09:15 AM Apr 16, 2021 | Team Udayavani |

ಹೊಸದಿಲ್ಲಿ: ದೇಶದಲ್ಲಿ ಕೋವಿಡ್-19 ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಭಾರತೀಯ ಪುರಾತತ್ವ ಸರ್ವೇ(ಎಎಸ್ಐ) ಅಡಿ ಬರುವ ಎಲ್ಲ ಸ್ಮಾರಕಗಳು, ವಸ್ತು ಸಂಗ್ರಹಾಲಯಗಳು ಹಾಗೂ ಇತರೆ ಪ್ರವಾಸಿ ತಾಣಗಳನ್ನು ತತ್‌ಕ್ಷಣದಿಂದಲೇ ಮುಚ್ಚುವಂತೆ ಕೇಂದ್ರ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.

Advertisement

ಮೇ 15ರವರೆಗೂ ಈ ಆದೇಶ ಜಾರಿಯಲ್ಲಿರಲಿದೆ. ಕೇಂದ್ರ ಸರ್ಕಾರದಿಂದ ಸಂರಕ್ಷಿಸಲ್ಪಟ್ಟ ಎಲ್ಲ ಸ್ಮಾರಕಗಳನ್ನೂ ಬಂದ್‌ ಮಾಡಲು ನಿರ್ಧರಿಸಲಾಗಿದೆ ಎಂದು ಸಂಸ್ಕೃತಿ ಸಚಿವ ಪ್ರಹ್ಲಾದ್‌ ಪಟೇಲ್‌ ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ:ಕೇಂದ್ರದ ಲಸಿಕಾ ಉತ್ಸವಕ್ಕೆ ಹಿನ್ನಡೆ! ಗೊಂದಲ ಸೃಷ್ಟಿಸುವ ಆರೋಗ್ಯ ಇಲಾಖೆಯ ಎರಡು ವರದಿಗಳು

ದೇಶದಲ್ಲಿ ಒಟ್ಟು3693 ಸ್ಮಾರಕಗಳು ಮತ್ತು 50 ವಸ್ತು ಸಂಗ್ರಹಾಲಯಗಳು ಕೇಂದ್ರ ಸರ್ಕಾರದಿಂದ ಸಂರಕ್ಷಿಸಲ್ಪಟ್ಟ ಪಟ್ಟಿಯಲ್ಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next