Advertisement

Hanuman Jayanti: ಭದ್ರತೆಗೆ ರಾಜ್ಯಗಳಿಗೆ ಕೇಂದ್ರ ಸರಕಾರ ಸೂಚನೆ

01:17 AM Apr 06, 2023 | Team Udayavani |

ಹೊಸದಿಲ್ಲಿ: ದೇಶಾದ್ಯಂತ ಗುರುವಾರ ಹನುಮಾನ್‌ ಜಯಂತಿ ಹಿನ್ನೆಲೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಿ. ಹೀಗೆಂದು ರಾಜ್ಯಗಳಿಗೆ ಕೇಂದ್ರ ಗೃಹ ಸಚಿವಾ ಲಯ ಬುಧವಾರ ಮುನ್ನೆಚ್ಚರಿಕೆಯ ಸುತ್ತೋಲೆ ಕಳುಹಿಸಿದೆ.

Advertisement

ಮಾ.30ರಂದು ರಾಮನವಮಿ ವೇಳೆ ಪಶ್ಚಿಮ ಬಂಗಾಲ, ಬಿಹಾರಗಳಲ್ಲಿ ಕೋಮು ಗಲಭೆಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ ಅಂಥ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ. ಮುಖ್ಯವಾಗಿ ಪಶ್ಚಿಮ ಬಂಗಾಲ, ಬಿಹಾರಗಳಿಗೆ ಗಂಭೀರ ಎಚ್ಚರಿಕೆ ರವಾನಿಸಿದೆ. ಯಾವುದೇ ಸಂದರ್ಭದಲ್ಲಿಯೂ ಕೂಡ ಕೋಮು ಸಾಮರಸ್ಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ.

ಅರೆ ಸೇನಾಪಡೆ ನಿಯೋಜನೆ: ಕಲ್ಕತಾ ಹೈಕೋರ್ಟ್‌ನಿಂದ ತೀವ್ರ ತರಾಟೆಗೆ ಒಳಗಾದ ಬಳಿಕ ಪಶ್ಚಿಮ ಬಂಗಾಲ ಸರಕಾರ ಕೋಮುಸೂಕ್ಷ್ಮ ಪ್ರದೇಶಗಳಾದ ಹೂಗ್ಲಿ, ಹೌರಾ, ಬಾರೆಕ್‌ಪುರಗಳಲ್ಲಿ ಅರೆ ಸೇನಾಪಡೆಗಳನ್ನು ನಿಯೋಜಿಸಲು ನಿರ್ಧರಿಸಿದೆ. ಸದ್ಯ ಅಲ್ಲಿ ರಾಮನವಮಿ ವೇಳೆ ಹಿಂಸಾಕೃತ್ಯಗಳು ನಡೆದು ಪರಿಸ್ಥಿತಿ ಇನ್ನಷ್ಟೇ ತಹಬದಿಗೆ ಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next