Advertisement

ಮಿಷನರಿ ಶಾಲೆಗಳಲ್ಲಿ ಚಾಲಿಸಾ ಬೋಧಿಸಲಿ

09:54 AM Jan 03, 2020 | Team Udayavani |

ಬೇಗುಸರಾಯ್‌: ‘ಮಿಷನರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಸಂಸ್ಕಾರ ಇರುವುದಿಲ್ಲ. ಅಂಥವರು ಹೊರದೇಶಗಳಿಗೆ ಹೋದಾಗ ಗೋಮಾಂಸ ಸೇವಿಸುತ್ತಾರೆ’ ಎಂದು ಹೇಳುವ ಮೂಲಕ ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

Advertisement

ಇಲ್ಲಿಯ ಧಾರ್ಮಿಕ ಸಮಾರಂಭವೊದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಎಲ್ಲಾ ಖಾಸಗಿ ಮತ್ತು ಸರಕಾರಿ ಶಾಲೆಗಳಲ್ಲಿ ಹನುಮಾನ್‌ ಚಾಲೀಸ, ಭಗವದ್ಗೀತೆ ಶ್ಲೋಕಗಳನ್ನು ಕಲಿಸಬೇಕು. ನಾವು ಕೇಸರೀಕರಣ ಮಾಡುತ್ತಿದ್ದೇವೆ ಎಂಬ ಅಪವಾದಗಳಿಗೆ ಹೆದರಬಾರದು’ ಎಂದು ಹೇಳಿದ್ದಾರೆ.

ಬಳಿಕ ಸಿಎಎ ಬೆಂಬಲಿಸಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಮತ್ತು ಟಿಎಂಸಿ ಪಕ್ಷಗಳು ಪಾಕಿಸ್ಥಾನೀಯರ ರೀತಿ ವರ್ತಿಸುತ್ತಿವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next