Advertisement

Central Govt ಘೋರ ಅನ್ಯಾಯ ಮಾಡಿದೆ: ಸಚಿವ ಈಶ್ವರ ಖಂಡ್ರೆ

11:49 PM Feb 06, 2024 | Team Udayavani |

ಮಂಗಳೂರು: ಕೇಂದ್ರ ಸರಕಾರ ಘೋರ ಅನ್ಯಾಯ ಮಾಡಿದೆ, ಹಾಗಾಗಿ ಅದರ ವಿರುದ್ಧ ಹೋರಾಡುತ್ತಿದ್ದೇವೆ. ಕೇಂದ್ರಕ್ಕೆ ಎಚ್ಚರಿಕೆ ಕೊಡುತ್ತೇವೆ, ಈ ಅನ್ಯಾಯ ನಿಲ್ಲಿಸಿ ಎಂದು ರಾಜ್ಯ ಅರಣ್ಯ ಖಾತೆ ಸಚಿವ ಈಶ್ವರ ಖಂಡ್ರೆ ಪತ್ರಿ ಕಾಗೋಷ್ಠಿಯಲ್ಲಿ ಹೇಳಿದ್ದಾರೆ.

Advertisement

ಎನ್‌ಡಿಆರ್‌ಎಫ್‌ ನಿಧಿಯಲ್ಲಿ ನಯಾಪೈಸೆ ಕೊಟ್ಟಿಲ್ಲ, ರಾಜ್ಯಕ್ಕೆ ಅನ್ಯಾಯ ಮಾಡಿದರೆ ಆಗುವ ಎಲ್ಲ ಅನಾಹುತಗಳಿಗೂ ಕೇಂದ್ರವೇ ಹೊಣೆಯಾಗುತ್ತದೆ ಎಂದು ಎಚ್ಚರಿಸಿದರು.

ಅಭ್ಯರ್ಥಿ ತೀರ್ಮಾನ ವರಿಷ್ಠರಿಂದ
ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ವರಿಷ್ಠರು ತೀರ್ಮಾನಿಸಿ ಅಂತಿಮಗೊಳಿಸುತ್ತಾರೆ, ಆಗಿ ಬೀದರ್‌ನಲ್ಲಿ ಯಾರನ್ನೇ ನಿಲ್ಲಿಸಿದರೂ ಗೆಲ್ಲಿಸುತ್ತೇನೆ ಎಂದರು.

ಎಲ್ಲ ಕಡೆಗಳಲ್ಲೂ ಬಹಳ ಮಂದಿ ಅರ್ಹ ಯೋಗ್ಯ ಅಭ್ಯರ್ಥಿಗಳಿದ್ದಾರೆ. ರಾಜ್ಯದಲ್ಲಿ ಕನಿಷ್ಠ 22 ಸೀಟ್‌ ಗೆಲ್ಲುತ್ತೇವೆ ಎಂದ ಅವರು ಬಿಜೆಪಿಗೆ ಜಗದೀಶ್‌ ಶೆಟ್ಟರ್‌ ಅವರು ಮರಳಿದ್ದರೂ ಲಕ್ಷ್ಮಣ ಸವದಿ ಮಾತ್ರ ಮರಳಿ ಹೋಗುವುದಿಲ್ಲ ಎಂದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next