Advertisement

105 ವರ್ಷಗಳ ಇತಿಹಾಸವಿರುವ ವಿಐಎಸ್‌ ಎಲ್‌ ಸ್ಥಗಿತಕ್ಕೆ ನಿರ್ಧಾರ

11:46 PM Feb 13, 2023 | Team Udayavani |

ಹೊಸದಿಲ್ಲಿ: ಕೈಗಾರಿಕೀಕರಣದ ಹೆಗ್ಗುರುತಾಗಿರುವ, ಬರೋಬ್ಬರಿ 105 ವರ್ಷಗಳ ಇತಿಹಾಸದ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಸ್ಥಾವರ (ವಿಐಎಸ್‌ಎಲ್‌)ವನ್ನು ಮುಚ್ಚಲು ಕೇಂದ್ರ ಸರಕಾರ ನಿರ್ಧರಿಸಿದೆ.

Advertisement

ಈ ಕುರಿತು ಸೋಮವಾರ ಸಂಸತ್ತಿಗೆ ಮಾಹಿತಿ ನೀಡಿರುವ ಸರಕಾರ, ವಿಐಎಸ್‌ಎಲ್‌ ಯನ್ನು ಮುಚ್ಚಲು ನಿರ್ಧರಿಸಲಾಗಿದೆ. ಸಂಸ್ಥೆ ನಷ್ಟದಲ್ಲಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದೆ. ಸರಕಾರವು ಆರಂಭದಲ್ಲಿ ವಿಐಎಸ್‌ಎಲ್‌ ಖಾಸಗೀಕರಣಕ್ಕೆ ಮುಂದಾಗಿತ್ತು. ಕಂಪೆನಿಯಲ್ಲಿ ಸೈಲ್‌ ಹೊಂದಿರುವ ಶೇ. 100ರಷ್ಟು ಷೇರುಗಳ ಮಾರಾಟದತ್ತ ಹೆಜ್ಜೆಯಿಟ್ಟಿತ್ತು. ಆದರೆ ಬಿಡ್ಡರ್‌ ಗಳಿಂದ ಆಸಕ್ತಿ ವ್ಯಕ್ತವಾಗದ ಕಾರಣ ಈ ನಿರ್ಧಾರ ವನ್ನು ಕೈಬಿಟ್ಟಿತ್ತು.

Advertisement

Udayavani is now on Telegram. Click here to join our channel and stay updated with the latest news.

Next