Advertisement

ಬಲ್ಲೆಬೈಲು: ಗುಡ್ಡಕ್ಕೆ ಸಿಮೆಂಟ್‌ ವಾಲ್‌ ಕಾಮಗಾರಿ

09:24 PM Mar 08, 2020 | Sriram |

ಬ್ರಹ್ಮಾವರ: ಬಲ್ಲೆಬೈಲು ಬಳಿ ಕುಸಿದ ಗುಡ್ಡಕ್ಕೆ ಸಿಮೆಂಟ್‌ ವಾಲ್‌(ತಡೆ ಗೋಡೆ) ಕಾಮಗಾರಿ ಪ್ರಾರಂಭಗೊಂಡಿದೆ.ಕಳೆದ ಮಳೆಗಾಲದಲ್ಲಿ ರಸ್ತೆಯ ಮೇಲೆ ಗುಡ್ಡ ಜರಿದಿದ್ದರಿಂದ ಸಂಚಾರ ಅಸ್ತವ್ಯಸ್ತಗೊಂಡಿತ್ತು.

Advertisement

ಶಾಸಕ ಕೆ. ರಘುಪತಿ ಭಟ್‌ ಅವರ ಶಿಫಾರಸ್ಸಿನಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಗುಡ್ಡಕ್ಕೆ ಸಿಮೆಂಟ್‌ ವಾಲ್‌(ತಡೆಗೋಡೆ)ಚರಂಡಿ ಮುಂತಾದ ಕಾಮಗಾರಿ ಕೈಗೊಳ್ಳಲಾಗಿದೆ.

ಕಳೂ¤ರು ಸೀತಾನದಿಯಿಂದ ಸಂತೆಕಟ್ಟೆ ವ್ಯಾಪ್ತಿಯ ಬಲ್ಲೆಬೈಲು ತನಕ ಗಾಂ ಧಿ ಪಥ ಗ್ರಾಮ ಪಥ ಯೋಜನೆಯ ಅಡಿಯಲ್ಲಿ ನಿರ್ಮಾಣಗೊಂಡ ರಸ್ತೆಯ ಮೇಲೆ ಭಾರೀ ಮಣ್ಣು ಜರಿದು ಕೆಲವು ಕಾಲ ಈ ಮಾರ್ಗ ಸಂಪೂರ್ಣ ಬಂದ್‌ ಆಗಿತ್ತು. ಬಲ್ಲೆಬೈಲು, ಪರಂಗಿಹಿತ್ಲು, ಕುರ್ಪಾಡಿ ಸಂಪರ್ಕಿಸುವ ಗ್ರಾಮೀಣ ರಸ್ತೆಯಾಗಿದ್ದು, ಸುಗಮ ಸಂಚಾರಕ್ಕಾಗಿ ಶಾಶ್ವತ ಕಾಮಗಾರಿ ಪ್ರಾರಂಭವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next