Advertisement

ಬಂಧಿಸಲು ಹೋದ ಪೊಲೀಸರ ಮೇಲೆ ಮಾರಾಕಾಸ್ತ್ರದಿಂದ ದಾಳಿ! ಆರೋಪಿ ಕಾಲಿಗೆ ಗುಂಡೇಟು

11:01 AM Nov 18, 2020 | sudhir |

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಲವು ಪ್ರಕರಣದಲ್ಲಿ ಆರೋಪಿಯಾಗಿದ್ದ ರೌಡಿಶೀಟರ್ ಮಂಜ ಅಲಿಯಾಸ್ ಬೊಂಡ ಮಂಜನ ಕಾಲಿಗೆ ಸಿಸಿಬಿ ಪೊಲೀಸರಿಂದ ಗುಂಡೇಟು ಬಿದ್ದಿದೆ.

Advertisement

ಈತನ ವಿರುದ್ಧ ಇಪ್ಪತ್ತಮೂರು ಪ್ರಕರಣಗಳು ದಾಖಲಾಗಿದ್ದು ಇದುವರಿಗೂ ಸಿಗದೇ ತಲೆಮರೆಸಿಕೊಂಡಿದ್ದ, ಸಿಸಿಬಿ ಪೊಲೀಸ್ ಇನ್ಸ್ ಪೆಕ್ಟರ್ ಪುನೀತ್ ಕುಮಾರ್ ಅವರ ತಂಡ ಆರೋಪಿ ಕೋಣನಕುಂಟೆಯಲ್ಲಿ ಇರುವ ಖಚಿತ ಮಾಹಿತಿಯನ್ನು ಪಡೆದು ತೆರಳುತ್ತಿದ್ದ ವೇಳೆ ಆರೋಪಿ ಬೈಕಿನಲ್ಲಿ ಪರಾರಿಯಾಗಿದ್ದಾನೆ ಈ ವೇಳೆ ನಾರಾಯಣನಗರ ಬಳಿ ಪೊಲೀಸರು ಅಡ್ಡಗಟ್ಟಿದಾಗ ಆರೋಪಿ ತನ್ನ ಕೈಯಲ್ಲಿದ್ದ ಮಾರಾಕಾಸ್ತ್ರದಿಂದ ಪೊಲೀಸ್ ಪೇದೆ ನಾಗರಾಜ್ ಅವರ ಮೇಲೆ ಹಲ್ಲೆ ನಡೆಸಿದ್ದಾನೆ ಪರಿಣಾಮ ನಾಗರಾಜ್ ಅವರ ಕೈಗೆ ಗಾಯವಾಗಿದೆ ಈ ವೇಳೆ ಸಿಸಿಬಿ ಇನ್ಸ್ ಪೆಕ್ಟರ್ ಪುನೀತ್ ಕುಮಾರ್ ಅವರು ರೌಡಿ ಶೀಟರ್ ಬೋಂಡ ಮಂಜನ ಕಾಲಿಗೆ ಗುಂಡು ಹರಿಸಿದ್ದಾರೆ.

ಇದನ್ನೂ ಓದಿ:ಹುಣಸೂರು: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ; ಚಾಲಕ ಅಪಾಯದಿಂದ ಪಾರು

ಗಾಯಾಳು ಪೊಲೀಸ್ ಮುಖ್ಯಪೇದೆ ನಾಗರಾಜ್ ಹಾಗೂ ಹಲವು ಪ್ರಕರಣದ ಆರೋಪಿಯಾಗಿದ್ದ ರೌಡಿಶೀಟರ್ ಬೋಂಡ ಮಂಜನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next