Advertisement

ಕೋಲ್ಕತ ಮಾಜಿ ಪೊಲೀಸ್‌ ಆಯುಕ್ತರ ವಿರುದ್ದ ಬುಧವಾರ ಸಾಕ್ಷ್ಯ ಮಂಡನೆ: ಸುಪ್ರೀಂಗೆ ಸಿಬಿಐ

08:48 AM May 01, 2019 | Sathish malya |

ಹೊಸದಿಲ್ಲಿ : ಬಹುಕೋಟಿ ವಂಚನೆಯ ಶಾರದಾ ಚಿಟ್‌ ಫ‌ಂಡ್‌ ಹಗರಣಕ್ಕೆ ಸಂಬಂಧಪಟ್ಟು ಕೋಲ್ಕತ ಮಾಜಿ ಪೊಲೀಸ್‌ ಕಮಿಷನರ್‌ ರಾಜೀವ್‌ ಕುಮಾರ್‌ ಅವರ ಕಸ್ಟಡಿ ತನಿಖೆಗೆ ಅವಕಾಶ ಕಲ್ಪಿಸಬೇಕೆಂದು ಸಿಬಿಐ ಸುಪ್ರೀಂ ಕೋರ್ಟಿಗೆ ಮನವಿ ಮಾಡಿಕೊಂಡಿದೆ.

Advertisement

ಸಿಬಿಐ ಮನವಿಯನ್ನು ವಿಚಾರಣೆಗೆ ಎತ್ತಿಕೊಂಡಿರುವ ಸುಪ್ರೀಂ ಕೋರ್ಟ್‌, ರಾಜೀವ್‌ ಕುಮಾರ್‌ ಅವರ ಕಸ್ಟಡಿ ತನಿಖೆಗೆ ಮೊದಲು ಆತನ ವಿರುದ್ಧದ ಸಾಕ್ಷ್ಯಗಳನ್ನು ಕೋರ್ಟಿನ ಮುಂದೆ ಮಂಡಿಸುವಂತೆ ಸರ್ವೋಚ್ಚ ನ್ಯಾಯಾಲಯ ಆದೇಶಿಸಿತು.

ರಾಜೀವ್‌ ಕುಮಾರ್‌ ಅವರ ಕಸ್ಟಡಿ ತನಿಖೆಯ ಕೋರಿಕೆಯಲ್ಲಿ ನ್ಯಾಯದ ಹಿತಾಸಕ್ತಿ ಇದೆಯೇ ಮತ್ತು ಆ ಕೋರಿಕೆಯು ಸಾಚಾ ಆಗಿದೆಯೇ ಎಂಬುದನ್ನು ನಾವು ಖಾತರಿ ಪಡಿಸಿಕೊಳ್ಳಬೇಕಿದೆ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿತು.

ಇದಕ್ಕೆ ಉತ್ತರವಾಗಿ ಸಿಬಿಐ, ತಾನು ನಾಳೆ ಬುಧವಾರ ರಾಜೀವ್‌ ಕುಮಾರ್‌ ವಿರುದ್ಧದ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ಹೇಳಿತು.

Advertisement

Udayavani is now on Telegram. Click here to join our channel and stay updated with the latest news.

Next