Advertisement

ಎನ್‌ಡಿಟಿವಿ ಸ್ಥಾಪಕ ರಾಯ್‌ ಮನೆ ಮೇಲೆ ಸಿಬಿಐ ದಾಳಿ

03:45 AM Jun 06, 2017 | Team Udayavani |

ನವದೆಹಲಿ: ಖಾಸಗಿ ಬ್ಯಾಂಕೊಂದಕ್ಕೆ ನಷ್ಟ ಉಂಟು ಮಾಡಿರುವ ಆರೋಪದಲ್ಲಿ ಎನ್‌ಡಿಟಿವಿ ಸ್ಥಾಪಕ ಪ್ರಣಯ್‌ ರಾಯ್‌ ಅವರ ನಿವಾಸದ ಮೇಲೆ ಸೋಮವಾರ ಸಿಬಿಐ ದಾಳಿ ನಡೆಸಿದೆ. ಆದರೆ, ದಾಳಿ ಬಗ್ಗೆ ಪ್ರತಿಕ್ರಿಯಿಸಿರುವ ಎನ್‌ಡಿ ಟಿವಿ, “ಹಳೇ ಸುಳ್ಳು ಆರೋಪ ಹೊರಿಸಿ ದಾಳಿ ಮಾಡಲಾಗುತ್ತಿದೆ. ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಇಂಥ ಯತ್ನಗಳ ವಿರುದ್ಧದ ನಮ್ಮ ಸಮರ ಮುಂದುವರಿಯುತ್ತದೆ’ ಎಂದು ಹೇಳಿದೆ.

Advertisement

ಐಸಿಐಸಿಐ ಬ್ಯಾಂಕ್‌ಗೆ 48 ಕೋಟಿ ರೂ. ನಷ್ಟ ಉಂಟುಮಾಡಿದ್ದಾರೆ ಎಂಬ ಆರೋಪದ ಮೇರೆಗೆ ಪ್ರಣಯ್‌ ರಾಯ್‌, ಪತ್ನಿ ರಾಧಿಕಾ ಹಾಗೂ ಆರ್‌ಆರ್‌ಪಿಆರ್‌ ಹೋ ಲ್ಡಿಂಗ್ಸ್‌ ವಿರುದ್ಧ ಸಿಬಿಐ ಕೇಸು ದಾಖಲಿಸಿದ್ದು, ಸೋಮವಾರ ದೆಹಲಿ ಹಾಗೂ ಡೆಹ್ರಾಡೂನ್‌ನ 4 ಪ್ರದೇಶಗಳಲ್ಲಿ ಸಿಬಿಐ ಪರಿಶೀಲನೆ ನಡೆಸಿದೆ. ದಾಳಿಯನ್ನು ಕಾಂಗ್ರೆಸ್‌, ಆಪ್‌, ತೃಣಮೂಲ ಕಾಂಗ್ರೆಸ್‌ ಖಂಡಿಸಿವೆ. ಇದು ದೇಶದಲ್ಲಿ ನಡೆಯುತ್ತಿರುವ ಅಧಿಕಾರದ ದುರ್ಬಳಕೆಗೆ ಸಾಕ್ಷಿ ಎಂದು ಬಣ್ಣಿಸಿವೆ. ಇದೇ ವೇಳೆ, ಸಚಿವ ವೆಂಕಯ್ಯ ನಾಯ್ಡು, “ದಾಳಿಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಿಲ್ಲ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next