Advertisement

ಮತ್ತೆ ಚಿದು ವಿಚಾರಣೆ

07:20 AM Jun 07, 2018 | Karthik A |

ಹೊಸದಿಲ್ಲಿ: ಐ.ಎನ್‌.ಎಕ್ಸ್‌. ಮಾಧ್ಯಮ ಸಂಸ್ಥೆ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಪಿ.ಚಿದಂಬರಂ ಅವರನ್ನು ಸಿಬಿಐ ಬುಧವಾರ 4 ಗಂಟೆಗಳ ಕಾಲ ವಿಚಾರಣೆ ನಡೆಸಿದೆ. ಮಾಧ್ಯಮ ಸಂಸ್ಥೆ ವಿದೇಶಿ ಬಂಡವಾಳ ಹೂಡಿಕೆ ಪಡೆಯಲು ಇರುವ ನಿಯಮಗಳಲ್ಲಿ ರಾಜಿ ಮಾಡಿಕೊಳ್ಳಲಾಗಿದೆ ಎನ್ನುವುದು ಸಿಬಿಐ ಆರೋಪ. ವಿಚಾರಣೆ ಬಳಿಕ ಮಾತನಾಡಿದ ಅವರು, ‘ನನ್ನ ಮೇಲೆ ಯಾವುದೇ ಆರೋಪಗಳಿಲ್ಲದೆ ಹೇಗೆ F.I.R.ದಾಖಲಿಸಲು ಸಾಧ್ಯ’ ಎಂದು ಪ್ರಶ್ನಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next