Advertisement

ಸಿಬಿಐನಿಂದ ಲಾಲು ಪ್ರಸಾದ್‌ ಯಾದವ್‌ ವಿಚಾರಣೆ

02:01 AM Mar 08, 2023 | Team Udayavani |

ಹೊಸದಿಲ್ಲಿ: ಉದ್ಯೋಗಕ್ಕಾಗಿ ಭೂಮಿ ಹಗರಣ ಸಂಬಂಧಿಸಿದಂತೆ ಮಾಜಿ ರೈಲ್ವೇ ಸಚಿವ, ಆರ್‌ಜೆಡಿ ನಾಯಕ ಲಾಲು ಪ್ರಸಾದ್‌ ಯಾದವ್‌ ಅವರನ್ನು ಸಿಬಿಐ ಅಧಿಕಾರಿಗಳು ಮಂಗಳವಾರ ವಿಚಾರಣೆ ನಡೆಸಿದ್ದಾರೆ.

Advertisement

ಹೊಸದಿಲ್ಲಿಯಲ್ಲಿ ಇರುವ ತಮ್ಮ ಪುತ್ರಿ ಮಿಶಾ ಭಾರತಿ ಅವರ ನಿವಾಸದಲಿದ್ದ ಲಾಲು ಅವರನ್ನು ಐದು ಮಂದಿ ಸಿಬಿಐ ಅಧಿಕಾರಿಗಳ ತಂಡ ಅಲ್ಲಿಯೇ ವಿಚಾರಣೆ ನಡೆಸಿತು.

ಯಾದವ್‌ ರೈಲ್ವೇ ಸಚಿವರಾಗಿದ್ದಾಗ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು, ರೈಲ್ವೇಯಲ್ಲಿ ಹಲವು ನೇಮಕ ಮಾಡಿದ ಆರೋಪ ಎದುರಿಸುತ್ತಿದ್ದಾರೆ.

ಸೋಮವಾರ ಪಟ್ನಾದಲ್ಲಿ ಮಾಜಿ ಸಿಎಂ ರಾಬಿ ದೇವಿ ಅವರಿಂದಲೂ ಸಿಬಿಐ ಹೆಚ್ಚುವರಿ ಮಾಹಿತಿ ಪಡೆದುಕೊಂಡಿತ್ತು. ಇದೇ ವೇಳೆ, “ನನ್ನ ತಂದೆಗೆ ಕಿರುಕುಳ ನೀಡಲಾಗುತ್ತಿದೆ’ ಎಂದು ಲಾಲು ಪುತ್ರಿ ರೋಹಿಣಿ ಆಚಾರ್ಯ ಟ್ವೀಟ್‌ ಮಾಡಿ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next