Advertisement

ಸಿಬಿಐ ಮಾಜಿ ಮುಖ್ಯಸ್ಥನ ವಿರುದ್ಧವೇ ಸಿಬಿಐ ಕೇಸು!

03:45 AM Feb 21, 2017 | |

ನವದೆಹಲಿ: ವಿವಾದಿತ ಮಾಂಸ ರಫ್ತುದಾರ ಮೊಯೀನ್‌ ಖುರೇಶಿ ಪರವಾಗಿ ವರ್ತಿಸಿದ ಆರೋಪದ ಮೇಲೆ ಕೇಂದ್ರೀಯ ತನಿಖಾ ದಳ (ಸಿಬಿಐ) ಮಾಜಿ ಮುಖ್ಯಸ್ಥ ಅಮರ್‌ ಪ್ರತಾಪ್‌ ಸಿಂಗ್‌ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ. ಜೊತೆಗೆ ಅಮರ್‌ ಅವರ ನಿವಾಸಕ್ಕೆ ದಾಳಿ ಮಾಡಿ ತಪಾಸಣೆ ನಡೆಸಿದೆ. ಸಂಸ್ಥೆಯ ನಿವೃತ್ತ ಮುಖ್ಯಸ್ಥನ ಮೇಲೆ ಸಿಬಿಐ ದಾಳಿ ನಡೆಸಿರುವುದು ಇದೇ ಮೊದಲು.

Advertisement

ಸಿಬಿಐ ದಾಖಲಿಸಿದ ಪ್ರಕರಣದಲ್ಲಿ ಖುರೇಶಿ, ಅವರ ಸಿಬ್ಬಂದಿ ಆದಿತ್ಯ ಶರ್ಮಾ, ಟ್ರೈಮ್ಯಾಕ್ಸ್‌ ಗ್ರೂಪ್‌ ಆಫ್ ಕಂಪನೀಸ್‌ನ ಪ್ರದೀಪ್‌ ಕೊನೇರು ಮತ್ತು ಇತರ ಅನಾಮಿಕ ವ್ಯಕ್ತಿಗಳನ್ನು ಹೆಸರಿಸಲಾಗಿದೆ. ಜೊತೆಗೆ ಆರೋಪಿಗಳಿಗೆ ಸೇರಿದ ನವದೆಹಲಿ, ಗಾಜಿಯಾಬಾದ್‌, ಚೆನ್ನೈ, ಹೈದ್ರಾಬಾದ್‌ನ ನಿವಾಸಗಳಿಗೆ ದಾಳಿ ಮಾಡಲಾಗಿದೆ. 

ಖುರೇಶಿ ಜನರಿಂದ ಹಣ ಪಡೆದು, ಸರ್ಕಾರದ ಹಲವು ಅಧಿಕಾರಿಗಳು ಅವರ ಪರವಾಗಿ ಇರುವಂತೆ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next