Advertisement
ಕಾವೇರಿ ನೀರು ನಿರ್ವಹಣ ಪ್ರಾಧಿಕಾರದ ಅಧ್ಯಕ್ಷ ಮಸೂದ್ ಹುಸೇನ್ ಅಧ್ಯಕ್ಷತೆಯಲ್ಲಿ ದಿಲ್ಲಿಯಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ಮತ್ತು ತಮಿಳುನಾಡು ವಾದ ಆಲಿಸಿ ಸಂಕಷ್ಟ ಪರಿಸ್ಥಿತಿ ಇರುವುದರಿಂದ ಮಳೆ ಬಂದರೆ ನೀರು ಬಿಡುಗಡೆ ಮಾಡಿ ಎಂದು ನಿರ್ದೇಶನ ನೀಡಿತು.
Related Articles
Advertisement
ನಮ್ಮಲ್ಲೇ ನೀರಿಲ್ಲ ಎಂದ ರಾಜ್ಯ
ಮುಂಗಾರು ವಿಳಂಬದಿಂದ ಕರ್ನಾಟಕ ತೀವ್ರ ಬರ ಎದುರಿಸುತ್ತಿದೆ. ಹಾರಂಗಿ, ಕಬಿನಿ, ಹೇಮಾವತಿ, ಕೆ.ಆರ್.ಎಸ್. ಅಣೆಕಟ್ಟೆಗಳಿಗೆ ನೀರು ಬಂದಿಲ್ಲ. ಇದರ ನಡುವೆಯೂ ತಮಿಳುನಾಡಿಗೆ 1.88 ಟಿಎಂಸಿ ನೀರು ಹರಿಸಲಾಗಿದೆ. ಕಳೆದ ವರ್ಷ ಜೂನ್ 1ರಿಂದ 20ರ ವರೆಗೆ ನಾಲ್ಕೂ ಜಲಾಶಯಗಳಲ್ಲಿ 68 ಟಿಎಂಸಿ ನೀರು ಸಂಗ್ರಹವಾಗಿತ್ತು. ಈ ಬಾರಿ ನೀರು ಸಂಗ್ರಹವಾಗಿಲ್ಲ, 1.77 ಟಿಎಂಸಿ ಮಾತ್ರ ಒಳಹರಿವು ಇದೆ. ಮುಂದೆ ಮಳೆ ಬಂದರೆ ತಮಿಳುನಾಡಿಗೆ ನೀರು ಬಿಡಲು ತಕರಾರಿಲ್ಲ . ಸುಪ್ರೀಂ ಕೋರ್ಟ್ ಆದೇಶ ಪಾಲಿಸಲು ಸದಾ ಸಿದ್ಧ ಎಂದು ಕರ್ನಾಟಕ ವಾದ ಮಂಡಿಸಿತು.