Advertisement

Politics: ಡಿಕೆಶಿಯಿಂದ ಕಾವೇರಿ ಉಲ್ಬಣ: ಈಶ್ವರಪ್ಪ

11:12 PM Sep 22, 2023 | Team Udayavani |

ಶಿವಮೊಗ್ಗ: ಕಾವೇರಿ ನೀರಿನ ಸಮಸ್ಯೆ ಉಲ್ಬಣಗೊಳ್ಳಲು ಡಿಸಿಎಂ ಡಿ.ಕೆ.ಶಿವಕುಮಾರ್‌ ಕಾರಣ. ಇದರ ಸಂಪೂರ್ಣ ಹೊಣೆ ಹೊತ್ತು ಅವರು ರಾಜೀನಾಮೆ ನೀಡಬೇಕು ಎಂದು ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಆಗ್ರಹಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಇಂಡಿಯಾ’ ಗ್ರೂಪ್‌ ಅನ್ನು ತೃಪ್ತಿಪಡಿಸಲು ಅವರು ಹೀಗೆ ಮಾಡಿದ್ದಾರೆ. ತಮಿಳುನಾಡು ಸಿಎಂ ಸ್ಟಾಲಿನ್‌ ಹಾಗೂ ಸೋನಿಯಾ ಗಾಂಧಿ  ಅವರ ಮೆಚ್ಚುಗೆ ಗಳಿಸಲು ಕದ್ದು ಮುಚ್ಚಿ ನೀರು ಬಿಟ್ಟಿದ್ದಾರೆ. ನೀರು ಬಿಡುವ ಮೊದಲೇ ಸರ್ವಪಕ್ಷಗಳ ಸಭೆ ಕರೆಯಬೇಕಿತ್ತು ಹಾಗೂ ನೀರಾವರಿ ತಜ್ಞರ ಅಭಿಪ್ರಾಯ ಕೇಳಬೇಕಿತ್ತು. ಈ ಹಿಂದೆ ಬಂಗಾರಪ್ಪ ಸಿಎಂ ಆಗಿದ್ದಾಗ ಇಂಥದ್ದೇ ಸ್ಥಿತಿ ಬಂದಿತ್ತು. ಸರ್ವಪಕ್ಷ ಸಭೆ ಕರೆದು ನೀರು ಬಿಡುವುದಿಲ್ಲ ಎಂದು ಬಂಗಾರಪ್ಪ ಹೇಳಿದ್ದರು. ಆವತ್ತು ಪಕ್ಷಬೇಧ ಮರೆತು ಎಲ್ಲರೂ ಒಂದಾಗಿದ್ದರು ಎಂದರು.

ಜೈಲಿಗೆ ಹೋಗಲು ಸಿದ್ಧ
ನೀರು ಬಿಡದೆ ನ್ಯಾಯಾಲಯದ ನಿಂದನೆ ಆರೋಪ ಹೊತ್ತುಕೊಂಡರೆ ಸಿದ್ದರಾಮಯ್ಯ ಅವರನ್ನು ಒಂಟಿಯಾಗಿ ಬಿಡುವುದಿಲ್ಲ. ಅವರ ಜತೆಗೆ ನಾವೂ ಜೈಲಿಗೆ ಹೋಗುತ್ತೇವೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next