Advertisement

Cauvery protest: ವೈದ್ಯರ ಬೆಂಬಲ; ಚನ್ನಪಟ್ಟಣದಲ್ಲಿ ಮುಂದುವರೆದ ಹೋರಾಟ

11:05 AM Oct 13, 2023 | Team Udayavani |

ರಾಮನಗರ: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಚನ್ನಪಟ್ಟಣದಲ್ಲಿ ಹೋರಾಟ ಮುಂದುವರೆದಿದ್ದು, ವೈದ್ಯರು ಬೆಂಬಲ ಸೂಚಿಸಿದ್ದಾರೆ.

Advertisement

ಚನ್ನಪಟ್ಟಣ ನಗರದ ಕಾವೇರಿ ವೃತ್ತದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯಿಂದ 100 ದಿನಗಳ ಹೋರಾಟ ನಡೆಯುತ್ತಿದೆ. ಇಂದು 9 ನೇ ದಿನದ ಹೋರಾಟ ನಡೆಯುತ್ತಿದ್ದು, ತಾಲೂಕು ವೈದ್ಯರು ಹೋರಾಟಕ್ಕೆ ಬೆಂಬಲ ನೀಡಿದ್ದಾರೆ.

ತಮಿಳುನಾಡಿನ ವಿರುದ್ಧ ವೈದ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್ ಗೌಡ ನೇತೃತ್ವದಲ್ಲಿ ಚಳವಳಿ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next