Advertisement

ಕಾವೇರಿ ತೀರ್ಪು ಹಿನ್ನಲೆ;ಗಡಿಯಲ್ಲಿ ಬಸ್‌ಗಳ ಸಂಚಾರ ಸ್ಥಗಿತ

09:12 AM Feb 16, 2018 | |

ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ಕುರಿತು  ನ್ಯಾಯಾಧಿಕರಣದ ತೀರ್ಪು ಪ್ರಶ್ನಿಸಿ ಕರ್ನಾಟಕ ಸೇರಿ ಮೂರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿ ಸಲ್ಲಿಸಿರುವ ಅರ್ಜಿ ಕುರಿತ ಅಂತಿಮ ತೀರ್ಪು ಶುಕ್ರವಾರ ಹೊರಬೀಳಲಿರುವ ಹಿನ್ನಲೆಯಲ್ಲಿ  ಕರ್ನಾಟಕಕ್ಕೆ  ತಮಿಳುನಾಡಿನಿಂದ ಬರಬೇಕಾದ ಮತ್ತು ತೆರಳಬೇಕಾದ ಬಸ್‌ಗಳ ಸಂಚಾರ  ಸ್ಥಗಿತಗೊಂಡಿದೆ. 

Advertisement

ತಮಿಳುನಾಡಿನಿಂದ ಬೆಂಗಳೂರಿಗೆ ಸಂಪರ್ಕಿಸುವ ಆನೇಕಲ್‌ನ ಅತ್ತಿಬೆಲೆವರೆಗೆ ಮಾತ್ರ ಬಸ್‌ಗಳು ಸಂಚರಿಸುತ್ತಿವೆ. ಮುಂಜಾಗೃತಾ ಕ್ರಮವಾಗಿ ಎಲ್ಲಾ ಬಸ್‌ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. 

ಮೈಸೂರಿಗೆ ಬರಬೇಕಾದ ಬಸ್‌ಗಳ ಸಂಚಾರವನ್ನು ತಮಿಳುನಾಡು ಸಾರಿಗೆ ಸಂಸ್ಥೆ ಸ್ಥಗಿತಗೊಳಿಸಿರುವ ಬಗ್ಗೆ ವರದಿಯಾಗಿದೆ. 400ಕ್ಕೂ ಹೆಚ್ಚು ಬಸ್‌ಗಳ ಸಂಚಾರ ಸ್ಥಗಿತಗೊಂಡಿದೆ. 

ಚಾಮರಾಜನಗರದಲ್ಲೂ ಗಡಿ ಭಾಗದಲ್ಲಿ ತಮಿಳುನಾಡಿನಿಂದ ಬರಬೇಕಾದ ಬಸ್‌ಗಳು ಬರುತ್ತಿಲ್ಲ ಎಂದು ವರದಿಯಾಗಿದೆ.

ಮಂಡ್ಯದ ಕೆಆರ್‌ಎಸ್‌ ಜಲಾಶಯದ ಬಳಿ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿದೆ.

Advertisement

ಬೆಂಗಳೂರಿನಲ್ಲಿ 15 ಸಾವಿರ ಮಂದಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next