Advertisement

ಬೆಚ್ಚಿ ಬೀಳಿಸುವ ಘಟನೆ: ಜನವಸತಿ ಪ್ರದೇಶದಲ್ಲೇ ತಂಡದಿಂದ ಯುವಕನ ಬರ್ಬರ ಹತ್ಯೆ…

04:09 PM Dec 22, 2022 | Team Udayavani |

ನವದೆಹಲಿ: ಜನವಸತಿ ಪ್ರದೇಶದಲ್ಲೇ ಯುವಕರ ತಂಡವೊಂದು ಯುವಕನನ್ನು ಥಳಿಸಿ ಜನರ ಎದುರೇ ಹರಿತವಾದ ಆಯುಧದಿಂದ ಇರಿದು ಕೊಲೆಗೈದ ಘಟನೆ ದೆಹಲಿಯ ಬದರ್‌ಪುರದಲ್ಲಿ ಬುಧವಾರ ರಾತ್ರಿ ಸಂಭವಿಸಿದೆ.

Advertisement

ಮೃತ ದುರ್ದೈವಿಯನ್ನು ಕೇಶವ್(30) ಎಂದು ಗುರುತಿಸಲಾಗಿದೆ.

ಘಟನೆಯ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಮೂವರು ಯುವಕರ ತಂಡ ಕೇಶವ್ ಬಳಿ ಯಾವುದೋ ವಿಚಾರವಾಗಿ ಮಾತು ಆರಂಭಿಸಿದ್ದಾರೆ ಬಳಿಕ ಮಾತಿಗೆ ಮಾತು ಬೆಳೆದು ಮೂವರು ಯುವಕರ ತಂಡ ಕೇಶವ್ ಮೇಲೆ ಹಲ್ಲೆ ನಡೆಸಿದ್ದಾರೆ ಈ ವೇಳೆ ಓರ್ವ ಯುವಕ ಚಾಕುವಿನಿಂದ ಇರಿದಿರುವುದು ಕಾಣಬಹುದು. ಆದರೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಯುತ್ತಿದ್ದರೆ ಸಾರ್ವಜನಿಕರು ಯಾರೂ ಹತ್ತಿರ ಹೋಗುವ ಸ್ಥಿತಿಯಲ್ಲಿರಲಿಲ್ಲ.

ಗಂಭೀರ ಗಾಯಗೊಂಡಿದ್ದ ಯುವಕನನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟೋತ್ತಿಗಾಗಲೇ ಯುವಕ ಮೃತಪಟ್ಟಿದ್ದ ಎಂದು ಆಸ್ಪತ್ರೆ ವೈದ್ಯರು ಹೇಳಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ಆಧಾರದ ಮೇಲೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರ ಹೇಳಿಕೆಯಂತೆ ಕಳೆದ ಒಂದು ವಾರದ ಹಿಂದೆ ಕೇಶವ್ ಜೊತೆ ಯುವಕರ ತಂಡ ಜಗಳಮಾಡಿಕೊಂಡಿದ್ದರು ಅದರ ಪ್ರತಿಯಾಗಿ ಯುವಕರು ಕೇಶವ್ ನನ್ನ ಚಾಕುವಿನಿಂದ ಇರಿದು ಕೊಲೆಗೈದಿದ್ದಾರೆ ಎಂದು ಹೇಳಿದ್ದಾರೆ.
ಮೃತ ಯುವಕ ಹಾಗೂ ಆರೋಪಿಗಳು ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿದವರು ಎಂದು ಹೇಳಲಾಗಿದೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next