Advertisement

ಧರ್ಮದ ಹೆಸರಲ್ಲಿ ಕುತಂತ್ರ ರಾಜಕಾರಣ: ಈಶ್ವರಪ್ಪ

08:40 AM Jul 27, 2017 | Team Udayavani |

ಶಿವಮೊಗ್ಗ: ಚುನಾವಣೆ ಹತ್ತಿರವಾಗುತ್ತಿರುವಂತೆಯೇ ಸಿಎಂ ಸಿದ್ದರಾಮಯ್ಯ ಅಡ್ಡದಾರಿ ಹಿಡಿಯುತ್ತಿದ್ದಾರೆ. ಮತ್ತೂಮ್ಮೆ ಅಧಿಕಾರಕ್ಕೆ ಬರಬೇಕೆಂದು ನೇರವಾಗಿ ಧರ್ಮ, ಜಾತಿ ಒಡೆಯುವ ಕುತಂತ್ರ ರಾಜಕೀಯ ನಡೆಸುತ್ತಿದ್ದಾರೆ ಎಂದು ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ದೂರಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತ್ಯೇಕ ಲಿಂಗಾಯತ ಧರ್ಮ ವಿಷಯ ಸಂಬಂಧ ಸಿದ್ದರಾಮಯ್ಯ
ರಾಜ್ಯದಲ್ಲಿ ವಿವಾದ ಹುಟ್ಟು ಹಾಕಿದ್ದಾರೆ. ಇದಕ್ಕೆ ವೀರಶೈವ ಮಠಾಧೀಶರು ಹಾಗೂ ಮುಖಂಡರೇ ವಿರೋಧ 
ವ್ಯಕ್ತಪಡಿಸುತ್ತಿದ್ದಾರೆ. 

ನೀರಾವರಿ ಸಚಿವರು ನೇರವಾಗಿ ಧರ್ಮ ರಾಜಕಾರಣದಲ್ಲಿ ನಿರತರಾಗಿದ್ದಾರೆ. ಅಧಿಕಾರಕ್ಕಾಗಿ ವೀರಶೈವರನ್ನು
ಒಡೆದಾಳುವುದು ಬೇಡ. ಬೇಕಿದ್ದರೆ ಸಿಎಂ ಸಿದ್ದರಾಮಯ್ಯ “ಕಾಂಗ್ರೆಸ್‌ ವೀರಶೈವ ಧರ್ಮ’ ಮಾಡಿಕೊಳ್ಳಲಿ. ಅದಕ್ಕೆ
ನಮ್ಮದೇನೂ ಅಭ್ಯಂತರವಿಲ್ಲ ಎಂದು ಕಿಡಿ ಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next