Advertisement

ಜಾತಿ ನಿಂದನೆ ಆರೋಪ: ಪ್ರತಿಭಟನೆ

01:03 PM Sep 30, 2020 | Suhan S |

ಕನಕಪುರ: ಕಾರ್ಮಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದಕ್ಕೆ ಕಾರ್ಖಾನೆ ಸೂಪರ್‌ವೈಸರ್‌ ಮತ್ತು ಆತನ ಸಮುದಾಯವನ್ನು ಅವಮಾನಿಸಿ ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ಆರೋಪಿಸಿ ಕಾರ್ಖಾನೆಯ ಜನರಲ್‌ ಮ್ಯಾನೇಜರ್‌ ವಿರುದ್ಧ ದಲಿತ ಸಂಘಟನೆಗಳ ಒಕ್ಕೂಟ ಕಾರ್ಖಾನೆ ಮುಂದೆ ಪ್ರತಿಭಟನೆ ನಡೆಸಿದರು.

Advertisement

ಪ್ರತಿಭಟನೆಯಲ್ಲಿ ಮಾತನಾಡಿದ ಬೆಂಚಕಲ್‌ದೊಡ್ಡಿ ರುದ್ರೇಶ್‌, ಹಾರೋ ಹಳ್ಳಿ ಕೈಗಾರಿಕಾ ಪ್ರದೇಶದ ಪ್ರೋಜ್‌ಪ್ರೋ ಎಂಬ ಕಾರ್ಖಾನೆಯಲ್ಲಿ ನಮ್ಮ ಸಮುದಾಯದ ಶ್ರೀನಿವಾಸ ಮೂರ್ತಿ ಕಳೆದ 12 ವರ್ಷಗಳಿಂದ ಕಾರ್ಖಾನೆ ಮೇಲ್ವಿಚಾರಕನಾಗಿ ಕಾರ್ಮಿಕರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿಕೊಂಡು ಪ್ರಮಾಣಿಕವಾಗಿಕಾರ್ಯನಿರ್ವಹಿಸುತ್ತಿದ್ದ. ಆದರೆ ಕಾರ್ಮಿಕರ ಆರೋಗ್ಯ ಮತ್ತು ಸುರಕ್ಷತೆಯ ವಿಚಾರವಾಗಿ ಕಾರ್ಖಾನೆಯ ಜನರಲ್‌ ಮ್ಯಾನೇಜರ್‌ ಚಿದಾನಂದ್‌ ಹಿರೇಮಠ್ ಅವಾಚ್ಯ ಶಬ್ದಗಳಲ್ಲಿ ನಿಂದನೆ ಮಾಡಿ ನೀನು ದಲಿತ ಕುಟುಂಬದವನ್ನು ಎಂದು ನಮ್ಮ ಸಮುದಾಯವನ್ನು ನಿಂದನೆ ಮಾಡಿ, ಕೆಲಸಕ್ಕೆ ಬರಬಾರದು ಎಂದು ಆದೇಶ ನೀಡಿದ್ದಾರೆ ಎಂದು ದೂರಿದರು.

ಹಾರೋಹಳ್ಳಿ ವೃತ್ತ ನೀರಿಕ್ಷಕ ಸತಿಶ್‌ ಅವರ ನೇತೃತ್ವದಲ್ಲಿ ನಡೆದ ಸಂಧಾನ ನಭೆಯಲ್ಲಿ ಕಾರ್ಖಾನೆ ಜನರಲ್‌ ಮ್ಯಾನೇಜರ್‌ ಚಿದಾನಂದ್‌ ಹಿರೇಮs…, ಶ್ರೀನಿವಾಸ್‌ ಮೂರ್ತಿಯನ್ನು ಕೆಲಸಕ್ಕೆ ನೇಮಿಸಿಕೊಳ್ಳಲು ಆಗುವುದಿಲ್ಲ ಎಂದಿದ್ದು, ಶ್ರೀನಿವಾಸ್‌ ಮೂರ್ತಿಯನ್ನು ಮತ್ತೆಕೆಲಸಕ್ಕೆ ನೇಮಕ ಮಾಡಿಕೊಳ್ಳುವವರೆಗೂ ನಮ್ಮ ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ ಎಂದು ಕಾರ್ಖಾನೆ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ದಲಿತ ಸಂಘಟನೆ ಒಕ್ಕೂಟದ ಡಾ.ಜಿ.ಗೋವಿಂದಯ್ಯ,ಕೋಟೆಕುಮಾರ್‌ ,ಪ್ರಕಾಶ್‌, ಬನಶಂಕರಿ ನಾಗು, ಕಲಾºಳು ಲಕ್ಷ್ಮಣ್‌, ಯಡುವನಹಳ್ಳಿ ಚಂದ್ರು, ಶ್ಯಾಮ್‌,ಕಾಳರಾಜು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next