Advertisement

ಚುನಾವಣೆಗೆ ಮುನ್ನ ಜನರಿಗೆ ಹಣ ಹಂಚಿಕೆ : ಕಮಲ್ ಆರೋಪ

05:10 PM Apr 06, 2021 | Team Udayavani |

ಕೊಯಮತ್ತೂರು : ತಮಿಳು ನಾಡಿನ ವಿಧಾನಸಭಾ ಚುನಾವಣೆಗೆ ಮುನ್ನ ಸೋಮವಾರ ರಾತ್ರೋ ರಾತ್ರಿ ರಾಜಕೀಯ ಪಕ್ಷಗಳು ಜನರಿಗೆ ಹಣ ಹಂಚಿವೆ ಎಂದು ಮಕ್ಕಳ್ ನೀಧಿ ಮಯ್ಯಂ(ಎಮ್ ಎನ್ ಎಮ್) ಪಕ್ಷದ ಸ್ಥಾಪಕ ಕಮಲ್ ಹಾಸನ್ ಆರೋಪಿಸಿದ್ದಾರೆ.

Advertisement

ಓದಿ : ಸರಕಾರಿ ಶಾಲೆಗಳಲ್ಲಿ ಪ್ರವೇಶಾತಿ ಹೆಚ್ಚಳ ನಿರೀಕ್ಷೆ

ಈ ಬಗ್ಗೆ ಕಮಲ್ ಹಾಸನ್ ಕೋಯಮತ್ತೂರಿನ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಮತಗಟ್ಟೆ ಅಧಿಕಾರಿಯವರಿಗೆ ದೂರು ನೀಡಿದ್ದು, ತುಂಬಾ ಮೋಸದಿಂದ ಹಾಗೂ ತ್ವರಿತ ಗತಿಯಲ್ಲಿ ಹಣ ಹಂಚಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ನಾವು ಹಣ ಹಂಚಿದವರಲ್ಲಿ ಕೆಲವರನ್ನು ಕಂಡು ಹಿಡಿದಿದ್ದೇವೆ. ಚುನಾವಣಾ ಅಧಿಕಾರಿಗಳು ಆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಈ ಬಗ್ಗೆ ನಾವು ಪ್ರತಿಭಟನೆ ಮಾಡುವುದಾಗಲಿ ಅಥವಾ ಮತದಾನ ಪಕ್ರಿಯೆಗೆ ತಡೆವೊಡ್ಡುವುದಾಗಲಿ ಮಾಡುವುದಿಲ್ಲ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಓದಿ : ರಾತ್ರಿ ಮನೆಯಲ್ಲಿ ಮಲಗಲೂ ಹೆದರಿಕೆಯಾಗುತ್ತಿದೆ: ಯು.ಟಿ.ಖಾದರ್

Advertisement
Advertisement

Udayavani is now on Telegram. Click here to join our channel and stay updated with the latest news.

Next