Advertisement

ಆಂಧ್ರ CM ಪೋಸ್ಟರ್‌ ಹರಿದ ನಾಯಿ ಮೇಲೆಯೇ ಕೇಸ್‌ !

07:29 PM Apr 13, 2023 | Team Udayavani |

ವಿಜಯವಾಡ: ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ. ಎಸ್‌. ಜಗನ್‌ ಮೋಹನ್‌ ರೆಡ್ಡಿ ಅವರ ಪೋಸ್ಟರ್‌ ಹರಿದ ಕಾರಣಕ್ಕೆ ನಾಯಿಯೊಂದರ ಮೇಲೆಯೇ ಕೇಸ್‌ ಹಾಕಿದ ಅಪರೂಪದ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.

Advertisement

ಮನೆಯೊಂದರ ಗೋಡೆಯ ಮೇಲೆ ಅಂಟಿಸಿದ್ದ ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ. ಎಸ್‌. ಜಗನ್‌ ಮೋಹನ್‌ ರೆಡ್ಡಿ ಅವರ ಪೋಸ್ಟರ್‌ ಒಂದನ್ನು ನಾಯಿ ತನ್ನ ಬಾಯಿಯಿಂದ ಕಚ್ಚಿ ಹರಿದಿತ್ತು. ಈ ಪೋಸ್ಟರ್‌ ಮೇಲೆ ʻಜಗನಣ್ಣ ಮಾ ಭವಿಷ್ಯತುʼ (ಜಗನ್‌ ಆಣ್ಣ ನಮ್ಮ ಭವಿಷ್ಯ) ಎಂದು ಬರೆಯಲಾಗಿತ್ತು.

ನಾಯಿಯೊಂದು ಈ ಪೋಸ್ಟರ್‌ ಅನ್ನು ಬಾಯಿಯಿಂದ ಕಚ್ಚಿ ಹರಿಯುತ್ತಿರುವುದನ್ನು ಯಾರೋ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿದುಬಿಟ್ಟಿದ್ದರು. ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದೂ ಅಲ್ಲದೇ ಭಾರೀ ಟ್ರೋಲ್‌ ಕೂಡಾ ಆಗಿತ್ತು.

ಹೀಗಾಗಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ನಾಯಿ ಮೇಲೆಯೇ ಕೇಸ್‌ ದಾಖಲಾಗಿದೆ. “ತೆಲುಗು ದೇಶಂ ಪಕ್ಷ”ದ ಕಾರ್ಯಕರ್ತೆಯಾಗಿರುವ ದಾಸರಿ ಉದಯಶ್ರೀ ಎಂಬ ಮಹಿಳೆಯೊಬ್ಬರು ವಿಜಯವಾಡ ಪೋಲಿಸ್‌ ಠಾಣೆಯಲ್ಲಿ ನಾಯಿ ಮೇಲೆಯೇ ದೂರು ನೀಡಿದ್ದಾರೆ ಎನ್ನಲಾಗಿದೆ.

ದೂರು ನೀಡಿದ ಬಳಿಕ ಮಾತನಾಡಿದ ದಾಸರಿ ಉದಯಶ್ರೀ,ʼಜಗನ್‌ ಅವರ ಪಕ್ಷವು 151 ಸ್ಥಾನಗಳನ್ನು ಗೆದ್ದಿದೆ. ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಅತ್ಯಂತ ಗೌರವಯುತ ಸ್ಥಾನದಲ್ಲಿದ್ದಾರೆ. ಈ ಪ್ರಕರಣದ ಬೆನ್ನಿಗಿರುವವರನ್ನು ಮತ್ತು ನಾಯಿಯನ್ನು ತಕ್ಷಣ ಬಂಧಿಸಬೇಕುʼ ಎಂದು ಅವರು ಹೇಳಿದ್ದಾರೆ.

Advertisement

 

ಇದಕ್ಕೆ ಪ್ರತಿಕೃಯಿಸಿರುವ ಕೆಲವರು, ಜಗನ್‌ ಅವರನ್ನು ವಗ್ಯ ಮಾಡುವುದಕ್ಕಾಗಿಯೇ ಪ್ರತಿಪಕ್ಷದವರು ದಾಸರಿ ಮೂಲಕ ಇದನ್ನು ಮಾಡಿಸಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿViral Video: ಮೊಮ್ಮಗನ ಮದುವೆಯಲ್ಲಿ 96 ವರ್ಷದ ಅಜ್ಜನ ಭರ್ಜರಿ ನೃತ್ಯ: ಫಿದಾ ಆದ ನೆಟ್ಟಿಗರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next