Advertisement

ಬಿಹಾರ ಕೋರ್ಟಿನಲ್ಲಿ ಸಿಎಂ ರೂಪಾಣಿ, ಅಲ್ಪೇಶ್‌ ವಿರುದ್ಧ ಕೇಸು

11:00 AM Oct 12, 2018 | udayavani editorial |

ಪಟ್ನಾ : ಗುಜರಾತ್‌ನಲ್ಲಿ  ಬಿಹಾರದ ವಲಸೆ ಕಾರ್ಮಿಕರ ಮೇಲಿನ ಹಿಂಸಾ ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿನ ನ್ಯಾಯಾಲಯವೊಂದರಲ್ಲಿ ಗುಜರಾತ್‌ ಮುಖ್ಯಮಂತ್ರಿ ವಿಜಯ್‌ ರೂಪಾಣಿ ಮತ್ತು ರಾಜ್ಯದ ಕಾಂಗ್ರೆಸ್‌ ಶಾಸಕ ಅಲ್ಪೇಶ್‌ ಠಾಕೋರ್‌ ವಿರುದ್ಧ ಕೇಸು ದಾಖಲಿಸಲಾಗಿದೆ. ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯವು ನವೆಂಬರ್‌ 2ಕ್ಕೆ ನಿಗದಿಸಿದೆ. 

Advertisement

ಸಾಮಾಜಿಕ ಕಾರ್ಯಕರ್ತ ತಮನ್ನ ಹಶ್ಮೀ ಅವರು ಮುಜಫ‌ರಪುರದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟರ (ಸಿಜೆಎಂ) ನ್ಯಾಯಾಲಯದಲ್ಲಿ ಕೇಸು ದಾಖಲಿಸಿರುವುದಾಗಿ ವರದಿಗಳು ತಿಳಿಸಿವೆ.  

ಸಿಎಂ ರೂಪಾಣಿ ಅವರು ಬಿಹಾರದ ವಲಸೆ ಕಾರ್ಮಿಕರ ಮೇಲಿನ ಹಿಂಸೆಯನ್ನು ತಡೆಯಲು ವಿಫ‌ಲರಾಗಿದ್ದಾರೆ ಮತ್ತು ಶಾಸಕ ಅಲ್ಪೇಶ್‌ ಠಾಕೂರ್‌ ಅವರ ಅವರು ಸೇನೆಯು ಬಿಹಾರದ ವಲಸೆ ಕಾರ್ಮಿಕರನ್ನು ರಾಜ್ಯದಿಂದ ಪಲಾಯನ ಮಾಡುವಂತೆ ಮಾಡಿದೆ ಎಂದು ಹಶ್ಮೀ ಅವರು ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ,

Advertisement

Udayavani is now on Telegram. Click here to join our channel and stay updated with the latest news.

Next