Advertisement

ಪ್ರವಾಸದ ಮಾಹಿತಿ ನೀಡದವರ ವಿರುದ್ಧ ಕೇಸ್: ಡಿಸಿಎಂ ಕಾರಜೋಳ ಎಚ್ಚರಿಕೆ

02:15 PM Apr 11, 2020 | keerthan |

ಕಲಬುರಗಿ: ವಿದೇಶದಿಂದ ಮರಳಿ ಬಂದವರು ಹಾಗೂ ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ತಬ್ಲಿಘಿ ಎ- ಜಮಾತ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡವರು ಸ್ವಯಂ ಮಾಹಿತಿ ನೀಡದೇ ಹೋದಲ್ಲಿ ಅಂತವರ ವಿರುದ್ಧ ಮೊಕದ್ದಮೆ ದಾಖಲಿಸಿ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಜಿಲ್ಲಾಡಳಿತಕ್ಕೆ ಸ್ಪಷ್ಟವಾಗಿ ಸೂಚಿಸಿದರು.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಯಾರೇ ಆಗಲಿ ತಮ್ಮ ಪ್ರವಾಸದ ಮಾಹಿತಿ ನೀಡದೇ ಹೋದಲ್ಲಿ ಪ್ರಕರಣ ದಾಖಲಿಸಿ ಕಠಿಣ ‌ಕ್ರಮಕೈಗೊಳ್ಳಿ.‌ ಈಗಾಗಲೇ 14 ದಿನ ಹೋಂ ಕ್ವಾರಂಟೈನ್ ಮುಗಿದವರಿಗೆ ಇನ್ನೂ 14 ದಿನ ಹೋಂ ಕ್ವಾರಂಟೈನ್ ನಲ್ಲಿ ಇರಿಸಿ ನಿಗಾ ವಹಿಸಿ ಎಂದು ಹೇಳಿದರು

ಕೋವಿಡ್-19 ಸೋಂಕು ಹರಡದಂತೆ ಲಾಕ್ ಡೌನ್ ಜಾರಿಯಲ್ಲಿ ಇರುವುದರಿಂದ ಯಾರು ಉಪವಾಸ ಇರಬಾರದು. ಹೊಸದಾಗಿ ಪಡಿತರ ಚೀಟಿಗಾಗಿ ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಿದ 15,799 ಅರ್ಜಿದಾರರಿಗೆ ತಾತ್ಕಾಲಿಕ ಪಡಿತರ ಚೀಟಿ ನೀಡಿ ಎರಡು ತಿಂಗಳ ಕಾಲ ಆಹಾರ ಧಾನ್ಯ ನೀಡಬೇಕು ಎಂದು ಸಲಹೆ ನೀಡಿದರು.

ಪಡಿತರ ನೀಡಲು ಹಣ ಪಡೆಯುವ ಹಾಗೂ ಕಡಿಮೆ ಪಡಿತರ ನೀಡುವ ನ್ಯಾಯಬೆಲೆ ಅಂಗಡಿಗಳ ಪರವಾನಗಿ ಕೂಡಲೇ ರದ್ದು ಪಡಿಸಬೇಕು. ಆ ನ್ಯಾಯಬೆಲೆ ಅಂಗಡಿಗಳ ವ್ಯಾಪ್ತಿಯಲ್ಲಿ ಗ್ರಾಹಕರಿಗೆ ಸೊಸೈಟಿ ಮೂಲಕ ಪಡಿತರ ವಿತರಿಸಲು ಕ್ರಮ ವಹಿಸುವಂತೆ ಆಹಾರ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next