Advertisement
ತಮ್ಮ ವಿರುದಟಛಿದ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ಅಮಿತ್ ಮಿಶ್ರಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪ್ರಕರಣಕ್ಕೆ ಮಧ್ಯಂತರ ತಡೆ ನೀಡಿ ಆದೇಶಿಸಿತು. ಅಮಿತ್ ಮಿಶ್ರಾ 2015ರ ಸೆ.25ರಂದು ನಗರದ ಖಾಸಗಿ ಹೊಟೇಲ್ನಲ್ಲಿ ತಂಗಿದ್ದಾಗ ಈ ಘಟನೆ ನಡೆದಿತ್ತು. ಅವರ ಗೆಳತಿಯೆಂದು ಪರಿಚಯಿಸಿಕೊಂಡ ವಂದನಾ ಜೈನ್ ಮಿಶ್ರಾ ಅನುಪ ಸ್ಥಿತಿಯಲ್ಲಿ ಹೊಟೇಲ್ ಕೋಣೆ ಪ್ರವೇಶಿಸಿತ್ತಾಳೆ. ಬಳಿಕ ತನ್ನ ಮೇಲೆ ಅಮಿತ್ ಮಿಶ್ರಾ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಆಕೆ ಸೆ.27ಕ್ಕೆ ಅಶೋಕನಗರ ಪೊಲೀಸ್ ಠಾಣೆಯಲ್ಲಿದೂರು ದಾಖಲಿಸುತ್ತಾಳೆ, ಇದನ್ನು ಆಧರಿಸಿ ಪೊಲೀಸ್ ಎಫ್ಐಆರ್ ದಾಖಲಿಸಿಕೊಂಡಿರುತ್ತಾರೆ. ಅದನ್ನು ರದ್ದುಗೊಳಿಸುವಂತೆ ಕೋರಿ ಮಿಶ್ರಾ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.