Advertisement

Carnatic singer: ಸಂಗೀತ ಅಕಾಡೆಮಿ ಮುಖ್ಯಸ್ಥರ ವಿರುದ್ಧ ಗಾಯಕಿಯರಾದ ರಂಜನಿ, ಗಾಯತ್ರಿ ಕಿಡಿ

08:21 AM Mar 26, 2024 | Team Udayavani |

ಹೊಸದಿಲ್ಲಿ: ಚೆನ್ನೈ ಸಂಗೀತ ಅಕಾಡೆಮಿಯಲ್ಲಿ ಎದ್ದಿರುವ ವಿವಾದ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣಿಸುತ್ತಿಲ್ಲ. ಖ್ಯಾತ ಕರ್ನಾಟಕ ಸಂಗೀತಗಾರ ಟಿ.ಎಂ.ಕೃಷ್ಣನ್ಅವರಿಗೆ ಪ್ರಶಸ್ತಿ ನೀಡಿದ್ದನ್ನು ಖಂಡಿಸಿ ಸಂಗೀತೋತ್ಸವವನ್ನು ಬಹಿಷ್ಕರಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಟೀಕೆ ಮಾಡಿರುವ ಅಕಾಡೆಮಿ ಅಧ್ಯಕ್ಷ ಎನ್‌.ಮುರಳಿ ವಿರುದ್ಧ ಗಾಯಕಿಯರಾದ ರಂಜನಿ ಮತ್ತು ಗಾಯತ್ರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಕರ್ನಾಟಕ ಸಂಗೀತದ ಖ್ಯಾತ ಪಂಡಿತ ಸೋದರಿಯರಾದ ಇವರಿಬ್ಬರು ಮುರಳಿ ಅವರ ಹೇಳಿಕೆಯನ್ನು ಅನೀತಿ ಮತ್ತು ಅಪ್ರಾಮಾಣಿಕ ಎಂದು ಕರೆದಿದ್ದಾರೆ.

ಟಿಎಂ ಕೃಷ್ಣನ್‌ ಅವರಿಗೆ ಪ್ರಶಸ್ತಿ ನೀಡಿದ ಬಳಿಕ ಸೋದರಿಯರಿಬ್ಬರು ಸಂಗೀತ ಅಕಾಡೆಮಿಯು ವರ್ಷಾಂತ್ಯದಲ್ಲಿ ಆಯೋಜಿಸಿರುವ ಸಂಗೀತೋತ್ಸವದಲ್ಲಿ ಕಾರ್ಯಕ್ರಮ ನೀಡುವುದಿಲ್ಲ ಎಂದು ಘೋಷಿಸಿದ್ದರು. ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ಅಕಾಡೆಮಿಯ ಅಧ್ಯಕ್ಷ ಮುರಳಿ, ಇವರಿಬ್ಬರ ನಡೆಯನ್ನು ಖಂಡಿಸಿದ್ದರು. ಇದೀಗ ಪ್ರತಿಕ್ರಿಯಿಸಿರುವ ರಂಜನಿ ಮತ್ತು ಗಾಯತ್ರಿ, ಪ್ರಶಸ್ತಿ ಕೊಡುವ ನಿಮ್ಮ ವಿಶೇಷತೆಯನ್ನು ನಾವು ಪ್ರಶ್ನಿಸಿದ್ದೇವೆಯೇ? ನಿಮ್ಮ ಹೇಳಿಕೆ ಪ್ರಶಸ್ತಿ ಪಡೆದುಕೊಂಡ ವ್ಯಕ್ತಿಯ ಹೇಳಿಕೆಯಂತೆಯೇ ಇದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Lemon 10-12 ರೂ.! ಗ್ರಾಹಕರ ಜೇಬಿಗೆ ಬಿದ್ದ ಕತ್ತರಿ;  ಬಿಸಿಲ ಝಳದಂತೆ ದರವೂ ಏರಿಕೆ

Advertisement

Udayavani is now on Telegram. Click here to join our channel and stay updated with the latest news.

Next