Advertisement

Moodbidri ಬಡ ರೋಗಿಯನ್ನು ಬೆಂಗಳೂರಿಗೆ ಉಚಿತವಾಗಿ ತಲುಪಿಸಿದ ಕೇರ್‌ ಚಾರಿಟೆಬಲ್‌ ಸಂಸ್ಥೆ

12:57 AM Aug 22, 2024 | Team Udayavani |

ಮೂಡುಬಿದಿರೆ: ಸಾಮಾಜಿಕ ಜಾಲತಾಣಗಳು ಒಮ್ಮೊಮ್ಮೆ ಅತ್ಯಂತ ತುರ್ತಿಗೆ ಒದಗಿ ಬರುತ್ತವೆ ಎಂಬುದಕ್ಕೆ ಸಾಕ್ಷಿ ಇಲ್ಲಿದೆ.

Advertisement

ದೇರಳಕಟ್ಟೆ ಆಸ್ಪತ್ರೆಯಲ್ಲಿ ಲಿವರ್‌ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದ ಕೊಡಗು ಪೊನ್ನಂಪೇಟೆಯ 19ರ ಹರೆಯದ ಪ್ರತಿಭಾರನ್ನು ತುರ್ತಾಗಿ ಬೆಂಗಳೂರಿಗೆ ಒಯ್ಯಬೇಕಾಗಿತ್ತು. ಅವರು ಆರ್ಥಿಕವಾಗಿ ತುಂಬಾ ಕಷ್ಟದಲ್ಲಿದ್ದರು. ಇವರನ್ನು ಉಚಿತವಾಗಿ ಬೆಂಗಳೂರಿಗೆ ಸಾಗಿಸಲು ಆ್ಯಂಬುಲೆನ್ಸ್‌ ಬೇಕೆಂದು ಪತ್ರಕರ್ತ ರವಿ ಅವರ ಸಾಮಾಜಿಕ ಜಾಲತಾಣದ ಮೂಲಕ ವಿನಂತಿಸಲಾಯಿತು. ಇದನ್ನು ಮಂಗಳೂರಿನ ಎಂ.ಜಿ. ಹೆಗಡೆ ಅವರು ಕೂಡ ಫೇಸ್‌ಬುಕ್‌ಗೆ ಹಾಕಿದ್ದು, ಕೂಡಲೇ ಅವರ ಸ್ನೇಹಿತೆ ಮರಿಟಾ ಡಿ’ ಸೋಜಾರ ಮೂಲಕ ಮೂಡುಬಿದಿರೆಯ ಕೇರ್‌ ಚಾರಿಟೆಬಲ್‌ ಟ್ರಸ್ಟ್‌ನ ಮುಖ್ಯಸ್ಥ, ಐರಾವತ ಆ್ಯಂಬುಲೆನ್ಸ್‌ನ ಮಾಲಕ ಚಾಲಕ ಅನಿಲ್‌ ಮೆಂಡೋನ್ಸಾ ಅವರಿಗೆ ತಲುಪಿತು. ಕೂಡಲೇ ಅನಿಲ್‌ ಅವರು ಪ್ರತಿಭಾರನ್ನು ಬೆಂಗಳೂರಿನ ಆಸ್ಪತ್ರೆಗೆ ಒಯ್ದು ಸಕಾಲಿಕ ಚಿಕಿತ್ಸೆ ಲಭಿಸುವಂತೆ ಮಾಡಿದ್ದಾರೆ.

ಅನಿಲ್‌ ಕೋವಿಡ್‌ ಕಾಲದಲ್ಲಿ ಕಟ್ಟಡದಿಂದ ಬಿದ್ದು ಕೋಮಾಕ್ಕೆ ತಲುಪಿದ್ದ ಕಾರ್ಮಿಕನೊಬ್ಬರನ್ನು ತನ್ನ ಆ್ಯಂಬುಲೆನ್ಸ್‌ನಲ್ಲಿ 41 ಗಂಟೆಗಳ ಕಾಲ 2,700 ಕಿ.ಮೀ. ಕ್ರಮಿಸಿ ಉತ್ತರ ಪ್ರದೇಶದ ಮೊರದಾಬಾದ್‌ಗೆ ತಲುಪಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next