Advertisement

ಕಾರಂತ ಹುಟ್ಟು ಹಬ್ಬ  ಸಾಧನಾ ಪ್ರಶಸ್ತಿ ಪ್ರದಾನ

11:36 AM Oct 12, 2017 | Team Udayavani |

ಹಂಪನಕಟ್ಟೆ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕಲ್ಕೂರ ಪ್ರತಿಷ್ಠಾನದ ವತಿಯಿಂದ ಪುರಭವನದಲ್ಲಿ ಜರಗಿದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ| ಶಿವರಾಮ ಕಾರಂತ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಶ್ರೀಲಂಕಾದ ಅಂತಾರಾಷ್ಟ್ರೀಯ ಫ್ರೆಂಡ್‌ಶಿಪ್‌ ಜಾಂಬೂರಿಯಲ್ಲಿ ಭಾಗವಹಿಸಿದ ಕೊಡಿಯಾಲ್‌ಬೈಲ್‌ ಶಾರದಾ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಕಾರಂತ ಹುಟ್ಟುಹಬ್ಬ ಸಾಧನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Advertisement

ಸ್ಕೌಟ್ಸ್‌ ವಿದ್ಯಾರ್ಥಿಗಳಾದ ನಿಹಾಲ್‌ ಎನ್‌, ರವಿಗೋವಿಂದ ಭಟ್‌, ಸಮರ್ಥ್ ಎಸ್‌., ಗೋಕುಲ್‌, ಗೈಡ್ಸ್‌ ವಿದ್ಯಾರ್ಥಿ
ಗಳಾದ ಶಾರ್ವರಿ ವಿ.ಮಯ್ಯ, ಸಂಸ್ಕೃತಿ ಎಸ್‌., ಜನನಿ ಭಟ್‌, ಸಂಹಿತಾ ಬಿ., ಆಶ್ವಿ‌ ಹರೀಶ್‌ಕುಮಾರ್‌ ಕೆ.ಬಿ., ಭಾರತದ ಕಂಟಿಜೆಂಟ್‌ ನಾಯಕ ಸ್ಕೌಟ್‌ ಮಾಸ್ಟರ್‌ ದಿನೇಶ್‌ ಕೆ. ಅವರಿಗೆ ಪ್ರಶಸ್ತಿ ನೀಡಲಾಯಿತು.

ಖ್ಯಾತ ಸಾಹಿತಿ ಪ್ರೊ| ಕೆ.ಎಸ್‌.ನಿಸಾರ್‌ ಅಹ್ಮದ್‌, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ, ವಿಶ್ರಾಂತ ಕುಲಪತಿ
ಪ್ರೊ| ಬಿ.ಎ.ವಿವೇಕ ರೈ, ಕರ್ಣಾಟಕ ಬ್ಯಾಂಕಿನ ನಾನ್‌ ಎಕ್ಸಿಕ್ಯೂಟಿವ್‌ ಚೇರ್ಮನ್‌ ಪಿ.ಜಯರಾಮ್‌ ಭಟ್‌,
ಕಾರ್ಪೊರೇಶನ್‌ ಬ್ಯಾಂಕ್‌ ಡಿಜಿಎಂ ರಾಘವೇಂದ್ರ ಉಡುಪ, ಎ.ಜೆ.ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ|ಎ.ಜೆ.ಶೆಟ್ಟಿ,
ಸಿಂಡಿಕೇಟ್‌ ಬ್ಯಾಂಕ್‌ ಜನರಲ್‌ ಮ್ಯಾನೇಜರ್‌ ಸತೀಶ್‌ ಕಾಮತ್‌, ವಿಜಯ ಬ್ಯಾಂಕ್‌ ಡಿಜಿಎಂ ಸುಧಾಕರ ನಾಯಕ್‌, ಬಿ.ಎಡ್‌. ಕಾಲೇಜಿನ ಪ್ರಾಂಶುಪಾಲ ದಿವಾಕರ ಶೆಟ್ಟಿ, ದಯಾನಂದ ಕಟೀಲ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next