Advertisement

ಟ್ರಕ್‌ –ಕಾರು ನಡುವೆ ಭೀಕರ ಅಪಘಾತ; ಐವರ ದುರ್ಮರಣ

02:25 PM Jan 01, 2023 | Team Udayavani |

ಜೈಪುರ: ಕಾರು ಹಾಗೂ ಟ್ರಕ್‌ ನಡುವಿನ ಭೀಕರ ಅಪಘಾತದಲ್ಲಿ ಐವರು ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ಬಿಸರಸರ ಗ್ರಾಮದ ಬಳಿ ಶನಿವಾರ ರಾತ್ರಿ (ಡಿ.31 ರಂದು) ನಡೆದಿದೆ.

Advertisement

ರಾಜು ಮೇಘವಾಲ್, ನರೇಶ್ ಕುಮಾರ್, ದನರಾಮ್, ಬಬ್ಲು ಮತ್ತು ಮುರಳಿ ಶರ್ಮಾ ಮೃತರು.

ಇಟ್ಟಿಗೆಗಳನ್ನು ತುಂಬಿಸಿಕೊಂಡು ಟ್ರಕ್ ಪಲ್ಲುವಿನಿಂದ ಸರ್ದರ್ಶಹರ್ ಕಡೆಗೆ ಹೋಗುತ್ತಿದ್ದಾಗ ಬಿಸ್ರಾಸರ್ ಗ್ರಾಮದಿಂದ ಬರುತ್ತಿದ್ದ  ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದ ಪರಿಣಾಮ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.

ಘಟನೆಯ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನಿಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.

ಘಟನೆಯ ಬಳಿಕ ಟ್ರಕ್‌ ಚಾಲಕ ಪರಾರಿಯಾಗಿದ್ದು, ಪೊಲೀಸರು ಚಾಲಕನ ಪತ್ತೆಗೆ ಬಲೆ ಬೀಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next