Advertisement

ಕಾರು –ಲಾರಿ ಢಿಕ್ಕಿ : ಇಬ್ಬರ ಸಾವು; ಮೂವರಿಗೆ ಗಾಯ

02:55 PM May 07, 2017 | |

ಕಾಂಞಂಗಾಡ್‌: ಮುತ್ತಪ್ಪನಾರ್‌ ಕಾವು ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಮತ್ತು ಮಿನಿ ಲಾರಿ ಢಿಕ್ಕಿ ಹೊಡೆದು ಕಾರು ಚಾಲಕ ಸಹಿತ ಇಬ್ಬರು ಸಾವಿಗೀಡಾಗಿದ್ದು ಮೂವರಿಗೆ ಗಂಭೀರ ಗಾಯಗಳಾಗಿವೆ.

Advertisement

ಇರಿಟ್ಟಿ ಪಡಿಯೂರಿನ ಸಜೀ ವನ್‌(45) ಮತ್ತು ರೀನಾ (42) ಸಾವಿ ಗೀಡಾದವರು. ಪಡಿಯೂರಿನ ವಿಜೇಶ್‌ (44), ವನಜಾ(40) ಮತ್ತು ಸಾರಂಗ್‌(12) ಗಾಯಗೊಂಡವರು.ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸೇರಿಸಲಾಗಿದೆ.

ಅವರು ಶನಿವಾರ ಮಧ್ಯಾಹ್ನ ಪ್ರಯಾಣಿಸುತ್ತಿದ್ದ ಕಾರಿಗೆ ಎದುರಿನಿಂದ ಬಂದ ಲಾರಿ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿತು. ಸಜೀವನ್‌ ಚೆರುಪುಳದಲ್ಲಿ ಲಾಟರಿ ಟಿಕೆಟ್‌ ಮಾರಾಟ ವೃತ್ನಿ ಮಾಡುತ್ತಿದ್ದರು. ಅಪಘಾತಲ್ಲಿ ಕಾರಿನಲ್ಲಿ ಸಿಲುಕಿಕೊಂv ‌ವರನ್ನು ಅಗ್ನಿಶಾಮಕ ದಳದ ಸಿಬಂದಿ  ಪೊಲೀಸರು ಹಾಗೂ ಸ್ಥಳೀಯರು ಹೊರತೆಗೆದುಆಸ್ಪತ್ರೆಗೆ ಸಾಗಿಸಿದರು. ಆದರೆ ಸಜೀವನ್‌ ಮತ್ತು ರೀನಾ ಮೃತಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next