Advertisement

ಕಾರು, ಲಾರಿ ಡಿಕ್ಕಿ: ಕುಟುಂಬದ ನಾಲ್ವರು ಸೇರಿ 9 ಮಂದಿ ಸಾವು

07:10 AM Sep 14, 2017 | Team Udayavani |

ಯಲ್ಲಾಪುರ: ತಾಲೂಕಿನ ಅರಬೈಲ್‌ ಬಳಿ ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸೇರಿದಂತೆ 9 ಜನ ಸ್ಥಳ ದಲ್ಲೇ ಮೃತಪಟ್ಟ ಧಾರುಣ ಘಟನೆ ಬುಧವಾರ ನಡೆದಿದೆ.

Advertisement

ಬೆಳಗಾವಿ ಜಿಲ್ಲೆಯ ರಾಯಭಾಗದ ವೈಷ್ಣವಿ ವಿವೇಕ ಘಾಟಗೆ (5), ಅಭಿನವ ಚಂದ್ರಕಾಂತ ಕಾಂಬಳೆ (3), ವರದರಾಜ್‌ ವಿವೇಕ ಘಾಟಗೆ (ಒಂದೂವರೆ ವರ್ಷ)ಸಚಿನ್‌ ಮಧುಕರ್‌ ಜಾಂಡೇನವರ್‌ (28), ವಿವೇಕವಸಂತ ಘಾಟಗೆ (34), ರೇಣುಕಾ ಚಂದ್ರಕಾಂತ ಕಾಂಬಳೆ (30), ಗೌರವ ವಸಂತ ಮೇತ್ರಿ (58), ಮೇನಕಾ ವಿವೇಕ ಘಾಟಗೆ (28), ಚಾಲಕ ಮುಜಾಹಿದ್‌ ಇಕ್ಬಾಲ್‌ ನಾಯಕವಾಡಿ (32) ಮೃತಪಟ್ಟವರು. ಇವರು ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ ಪಡೆದು ಮಹಿಂದ್ರಾ ಕ್ಸೆ„ಲೋ ಕಾರಿನಲ್ಲಿ ಬರುತ್ತಿದ್ದರು. ಇವರ ಕಾರು ಅರಬೈಲ್‌ ಬಳಿ ಎದುರುಗಡೆಯಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದು, ಸಂಪೂರ್ಣ ಜಖಂಗೊಂಡಿದೆ. 

ಕಾರಿನಲ್ಲಿ ಸಿಲುಕಿ ಮೃತಪಟ್ಟವರನ್ನು ಹೊರಗೆ ತೆಗೆಯಲು ಅರಬೈಲ್‌ ಭಾಗದ ಯುವಕರು ಪೊಲೀಸರಿಗೆ ನೆರವಾದರು. ಕಾರಿನಲ್ಲಿ ನಾಲ್ವರನ್ನು ಹೊರ ತೆಗೆಯಲು ಸಾಧ್ಯ ವಾಗದೇ ಕ್ರೇನ್‌ ಸಹಾಯದಿಂದ ಹೊರ ತೆಗೆಯಲಾಯಿತು. ಅಪಘಾತದ ತೀವ್ರತೆಗೆ ಐವರ ದೇಹ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next