Advertisement

ಮರಕ್ಕೆ ಗುದ್ದಿದ ಕಾರು:ತಾಯಿ, ಪುತ್ರಿಯರಿಬ್ಬರ ದುರ್ಮರಣ 

10:01 AM Jan 02, 2018 | Team Udayavani |

ಚಿಕ್ಕೋಡಿ : ಇಲ್ಲಿನ ನಿಪ್ಪಾಣಿಯ ರಾಷ್ಟ್ರೀಯ ಹೆದ್ದಾರಿ 4 ರ ಸ್ತವನಿಧಿ ಘಾಟ್‌ ಬಳಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿದ ಪರಿಣಾಮ ತಾಯಿ ಮತ್ತು ಪುತ್ರಿಯರಿಬ್ಬರು ದಾರುಣವಾಗಿ ಸ್ಥಳದಲ್ಲೇ ಸಾವನ್ನಪ್ಪಿದ ಭೀಕರ ಅವಘಡ ಮಂಗಳವಾರ ಬೆಳಗಿನ ಜಾವ ನಡೆದಿದೆ. 

Advertisement

ಮೃತರು ಮಹಾರಾಷ್ಟ್ರ ಮೂಲದವರಾದ ಸಾವಿತ್ರಿ ಗುಪ್ತಾ (47) ಪುತ್ರಿಯರಾದ ಶೋಭಾ ಗುಪ್ತಾ (22) ಮತ್ತು ಆರತಿ ಗುಪ್ತಾ (21) ಎಂದು ತಿಳಿದು ಬಂದಿದೆ. 

ಕಾರಿನಲ್ಲಿದ್ದ ಚಾಲಕ ಮತ್ತು ಇನ್ನಿಬ್ಬರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಕಾರು ಚಾಲಕ ಸೂರ್ಯ  ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ. 

ಗಾಯಾಳುಗಳನ್ನು ಕೊಲ್ಲಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ನಿಪ್ಪಾಣಿ ಶಹರ ಠಾಣಾ ಪೊಲೀಸರು ಸ್ಥಳಕ್ಕೆ ದೌಡಾಟಯಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Advertisement

ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next