Advertisement

ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು: ವಿದ್ಯುತ್ ಶಾಕ್ ನಿಂದ ಮೂವರು ಸಾವು

02:57 PM Sep 24, 2020 | keerthan |

ಶಿವಮೊಗ್ಗ: ಕಾರೊಂದು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹೊಸನಗರ ತಾಲೂಕಿನ ಗರ್ತಿಕೆರೆ ಬಳಿ ಗುರುವಾರ ನಡೆದಿದೆ.

Advertisement

ರಿಪ್ಪನ್ ಪೇಟೆ ನಿವಾಸಿಗಳಾದ ಲೋಹಿತ್ (34), ಕಲಾವತಿ (60) ಹಾಗೂ ಶಶಾಂಕ್ (8) ಮೃತ ದುರ್ದೈವಿಗಳು.

ಧರ್ಮಸ್ಥಳಕ್ಕೆ ಹೊರಟಿದ್ದ ಇವರು ವಾಪಾಸು ಬರುವಾಗ ಘಟನೆ ನಡೆದಿದೆ. ಗರ್ತಿಕೆರೆ ಬಳಿ ಕಾರು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ. ಢಿಕ್ಕಿ ಹೊಡೆದಾಗ ಏನಾಯಿತು ಎಂದು ನೋಡಲು ಕಾರು ಚಲಾಯಿಸುತ್ತಿದ್ದ ಮಗ ಕಾರಿನಿಂದ ಕೆಳಗೆ ಇಳಿದಿದ್ದು, ಕೂಡಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ಕಾರಿನಿಂದ‌ ಕೆಳಗಿಳಿದ ಮಗ ಏಕಾಏಕಿ ಕುಸಿದು ಬಿದ್ದಿದ್ದರಿಂದ ಗಾಬರಿಯಾಗಿ ಕಾರಿನಿಂದ ಕೆಳಗಿಳಿದ ತಾಯಿಯೂ ಸ್ಥಳದಲ್ಲೇ ಸಾವನ್ನಪ್ಪಿದ್ದು, ಅಜ್ಜಿಯೊಂದಿಗೆ ಕಾರಿನಿಂದ ಕೆಳಗಿಳಿದ ಮೊಮ್ಮಗನೂ ಅಲ್ಲೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಚಿತ್ರೀಕರಣದ ವೇಳೆ ಹೃದಯಾಘಾತ: ಹಿರಿಯ ನಟ ರಾಕ್ ಲೈನ್ ಸುಧಾಕರ್ ನಿಧನ

Advertisement

ಕಾರಿನಿಂದ ಇಳಿದ ಮೂವರೂ ಕುಸಿದುಬಿದ್ದಿದ್ದರಿಂದ ಕಾರಿನಲ್ಲಿದ್ದ ಇನ್ನು ಮೂವರು ಕಾರಿನಲ್ಲೇ ಕುಳಿತಿದ್ದರಿಂದ ಅವರುಗಳು ಉಳಿದುಕೊಂಡಿದ್ದಾರೆ. ಕಲಾವತಿ ಅವರ ಮಗಳು ಅಂಬಿಕಾ (35), ಅಂಬಿಕಾ ಪತಿ ರವಿಭಟ್ (45) ಹಾಗೂ ಇವರ ಮಗ ಗಣೇಶ(15) ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಾಗ ವಿದ್ಯುತ್ ಶಾಕ್ ನಿಂದ ಈ ಮೂವರು ಮೃತಪಟ್ಟಿದ್ದಾರೆ ಎಂದು ಅನುಮಾನಿಸಲಾಗಿದೆ. ಮಳೆ ಇದ್ದು ನೆಲ ಹಸಿಯಾಗಿದ್ದರಿಂದ ನೆಲಕ್ಕಿಳಿದಾಗ ವಿದ್ಯುತ್ ಪ್ರವಹಿಸಿ ಅವಘಡ ಸಂಭವಿಸಿರಬಹುದು ಎನ್ನಲಾಗುತ್ತಿದೆ.

ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next