Advertisement

Belthangady ಗೇರುಕಟ್ಟೆ ಸಮೀಪ ರಸ್ತೆ ಬದಿ ದಿಬ್ಬಕ್ಕೆ ಕಾರು ಢಿಕ್ಕಿ

11:13 PM May 14, 2024 | Team Udayavani |

ಬೆಳ್ತಂಗಡಿ: ಗೇರುಕಟ್ಟೆ ಸಮೀಪದ ಸಂಬೋಳ್ಯ ತಿರುವು ರಸ್ತೆಯ ಪಕ್ಕದ ಮಣ್ಣಿನ ದಿಬ್ಬಕ್ಕೆ ಕಾರು ಢಿಕ್ಕಿಯಾದ ಘಟನೆ ಮೇ 14ರಂದು ಸಂಜೆ ಸಂಭವಿಸಿತು.

Advertisement

ಕಬಕದ ನಿವಾಸಿಯೋರ್ವರು ಕುಟುಂಬದ ಸದಸ್ಯರೊಂದಿಗೆ ಬೆಳ್ತಂಗಡಿ ಕಾಜೂರು ದರ್ಗಾ ಯಾತ್ರೆ ಮುಗಿಸಿ ಕಬಕಕ್ಕೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಕಾರಿನಲ್ಲಿ ಚಾಲಕ, ಇಬ್ಬರು ಮಹಿಳೆಯರು, ಮಕ್ಕಳು ಸೇರಿ ಏಳು ಮಂದಿ ಇದ್ದರು. ಅವರೆಲ್ಲರೂ ಸಣ್ಣ, ಪುಟ್ಟ ಗಾಯದೊಂದಿಗೆ ಪಾರಾಗಿದ್ದು, ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next