Advertisement

ವಿದ್ಯುತ್‌ ಕಂಬಕ್ಕೆ ಕಾರು ಢಿಕ್ಕಿ: ಐದು ಎಕರೆ ಪ್ರದೇಶಗಳಿಗೆ ಬೆಂಕಿ

10:31 AM Apr 26, 2017 | Team Udayavani |

ಉಡುಪಿ: ವಿದ್ಯುತ್‌ ಕಂಬಕ್ಕೆ ಕಾರು ಢಿಕ್ಕಿ ಹೊಡೆದು ವಿದ್ಯುತ್‌ ಕಂಬ ತುಂಡಾಗಿ ವಯರ್‌ ಕೆಳಕ್ಕೆ ಬಿದ್ದ ಪರಿಣಾಮ 5 ಎಕರೆ ಪ್ರದೇಶಕ್ಕೆ ಬೆಂಕಿ ಹತ್ತಿಕೊಂಡ ಘಟನೆ ಪೆರ್ಡೂರು ಗ್ರಾ.ಪಂ. ವ್ಯಾಪ್ತಿಯ ಪುತ್ತಿಗೆ ನೀರಿನ ಟ್ಯಾಂಕ್‌ ಬಳಿ ಮಂಗಳವಾರ ಸಂಜೆ ಸಂಭವಿಸಿದೆ. ಪ್ರಾಣಪಾಯ ಸಂಭವಿಸಿಲ್ಲ.

Advertisement

ಆಗುಂಬೆ ಕಡೆಯಿಂದ ಬರುತ್ತಿದ್ದ ಕಾರು ಸಂಜೆ 4 ಗಂಟೆ ಸುಮಾರಿಗೆ ಪುತ್ತಿಗೆ ಟ್ಯಾಂಕ್‌ ಬಳಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದಿದ್ದು, ಈ ವೇಳೆ ವಿದ್ಯುತ್‌ ಕಂಬ ತುಂಡಾಗಿ ವಯರ್‌ ನೆಲಕ್ಕೆ ಬಿದ್ದಿದೆ. ಅದರಿಂದ 5 ಎಕರೆ ಸರಧಿಕಾರಿ ಜಾಗಕ್ಕೆ ಬೆಂಕಿ ಹತ್ತಿಕೊಂಡಿದೆ. ಇದು ಸರಕಾರಿ ಜಾಗವಾಗಿದ್ದು, ಯಾವುದೇ ಕೃಷಿ ಇರಲಿಲ್ಲ. ಪರಿಣಾಮ ಪೆರ್ಡೂರು ಗ್ರಾ.ಪಂ. ವ್ಯಾಪ್ತಿಯ ನೀರಿನ ಪೈಪ್‌ಲೈನ್‌ ಸುಟ್ಟುಹೋಗಿದೆ.  ಢಿಕ್ಕಿ ಹೊಡೆದ ಕಾರಿನಲ್ಲಿ ಮೂವರು ಇದ್ದರು.ಕಾರಿನ ಎದುರು ಭಾಗ ಸಂಪೂರ್ಣ ನಜ್ಜುಗುಜ್ಜಾಗಿತ್ತು.ಐದು ಎಕರೆ ಪ್ರದೇಶಗಳಿಗೆ ಬೆಂಕಿ
 

Advertisement

Udayavani is now on Telegram. Click here to join our channel and stay updated with the latest news.

Next