Advertisement

Bantwal ಕಾರು ಢಿಕ್ಕಿ: ಸ್ಕೂಟರ್‌ ಸವಾರ, ಕಾರ್ಮಿಕನಿಗೆ ಗಾಯ

11:03 PM Sep 20, 2023 | Team Udayavani |

ಬಂಟ್ವಾಳ: ರಾ.ಹೆ. 75ರ ತುಂಬೆ ಸಮೀಪದ ಕಡೆಗೋಳಿಯಲ್ಲಿ ಡಿವೈಡರ್‌ ದಾಟಿ ವಿರುದ್ಧ ದಿಕ್ಕಿನ ರಸ್ತೆಗೆ ನುಗ್ಗಿದ ಕಾರು, ಮತ್ತೂಂದು ಕಾರು ಹಾಗೂ ಸ್ಕೂಟರಿಗೆ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್‌ ಸವಾರ ಹಾಗೂ ಡಿವೈಡರ್‌ ಮೇಲೆ ಹುಲ್ಲು ತೆಗೆಯುತ್ತಿದ್ದ ಕಾರ್ಮಿಕ ಗಾಯಗೊಂಡ ಘಟನೆ ಸೆ. 19ರ ಸಂಜೆ ನಡೆದಿದೆ.

Advertisement

ಘಟನೆಯಲ್ಲಿ ಹುಲ್ಲು ತೆಗೆಯುತ್ತಿದ್ದ ಕಾರ್ಮಿಕ ಹಾವೇರಿ ಮೂಲದ ನಾಗರಾಜ ಗುರುವಪ್ಪ ಹಾಗೂ ಸವಾರ ಜೆಸಿಮ್‌ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ. ಚಾಲಕ ಕಾರನ್ನು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನಾಗರಾಜ ಗುರುವಪ್ಪ ಅವರಿಗೆ ಢಿಕ್ಕಿ ಹೊಡೆದು ಬಳಿಕ ಡಿವೈಡರ್‌ ದಾಟಿ ವಿರುದ್ಧ ದಿಕ್ಕಿಗೆ ಹೋಗಿ ಕಾರು ಮತ್ತು ಸ್ಕೂಟರಿಗೆ ಢಿಕ್ಕಿ ಹೊಡೆದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಂಟ್ವಾಳ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next