ಗಂಗೊಳ್ಳಿ: ಬೈಕಿಗೆ ಕಾರು ಢಿಕ್ಕಿಯಾಗಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಕುಂದಬಾರಂದಾಡಿ ಗ್ರಾಮದ ಕೊಳೂರು ಕ್ರಾಸ್ ಬಳಿ ಸೋಮವಾರ ಸಂಭವಿಸಿದೆ.
ಕುಂದಬಾರಂದಾಡಿ ಮಹಾಲಿಂಗೇಶ್ವರ ದೇವಸ್ಥಾನ ಸಮೀಪದ ಜಗದೀಶ ಆಚಾರ್ಯ ಅವರ ಪತ್ನಿ ಸುಲೇಖಾ (34) ಮೃತಪಟ್ಟವರು.
ಜಗದೀಶ ಅವರು ಪತ್ನಿ ಸುಲೇಖಾ ಮತ್ತು ಮಗಳೊಂದಿಗೆ ಬೈಕ್ನಲ್ಲಿ ಕಟ್ಟಿನಮಕ್ಕಿ ಕಡೆಗೆ ಸಾಗುತ್ತಿದ್ದಾಗ ಕೊಳೂರು ಕ್ರಾಸ್ ಬಳಿ ಹಿಂದಿನಿಂದ ಬಂದ ಕಾರು ಢಿಕ್ಕಿ ಹೊಡೆಯಿತು. ಮೂವರೂ ರಸ್ತೆಗೆ ಉರುಳಿದ್ದು, ಸುಲೇಖಾಗೆ ತಲೆಯ ಹಿಂಭಾಗಕ್ಕೆ ಗಂಭೀರ ಗಾಯವಾಯಿತು. ತತ್ಕ್ಷಣವೇ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರು ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು. ಪ್ರಕರಣ ದಾಖಲಾಗಿದೆ.
Advertisement
ಬೈಕಿಗೆ ಕಾರು ಢಿಕ್ಕಿ: ಮಹಿಳೆ ಸಾವು
08:01 PM Mar 14, 2023 | Team Udayavani |
Advertisement
ಪ್ರೊಪೋಸಲ್ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !
Advertisement
Udayavani is now on Telegram. Click here to join our channel and stay updated with the latest news.