Advertisement

ಕಾರಿಗೆ ಬೈಕ್‌ ಢಿಕ್ಕಿ; ಸವಾರ  ಸಾವು

12:11 PM Jun 03, 2017 | Team Udayavani |

ಹೆಬ್ರಿ: ಮುನಿಯಾಲಿನಿಂದ ಹೆಬ್ರಿ ಕಡೆಗೆ ವೇಗವಾಗಿ ಬರುತ್ತಿದ್ದ ಬೈಕ್‌ವೊಂದು ತೀರ್ಥಹಳ್ಳಿಯಿಂದ ಧರ್ಮಸ್ಥಳಕ್ಕೆ ಹೋಗುತ್ತಿದ್ದ ಕಾರಿಗೆ ವರಂಗ ಬಳಿ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಸ್ಥಳದಲ್ಲೆ ಮೃತಪಟ್ಟ ಘಟನೆ ಜೂ.2ರಂದು ಸಂಭವಿಸಿದೆ.

Advertisement

ಮುನಿಯಾಲು ಮುಟ್ಲಪಾಡಿ ಪತ್ತೆರಕಟ್ಟೆ ನಿವಾಸಿ ಪ್ರದೀಪ್‌ (22) ಮೃತಪಟ್ಟವರು. ಹಿಂಬದಿ ಸವಾರೆ ದಿವ್ಯಾ ತೀವ್ರ ಸ್ವರೂಪದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next